News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಜ್ಜಯಿನಿ: ನಾಳೆ ʼಮಹಾಕಾಲ್‌ ಲೋಕ್‌ʼ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿ ಪವಿತ್ರ ನಗರದಲ್ಲಿ ಪ್ರವಾಸೋದ್ಯಮವನ್ನು ವೃದ್ಧಿಸುವ ನಿರೀಕ್ಷೆಯಿರುವ 856 ಕೋಟಿ ರೂಪಾಯಿ ವೆಚ್ಚದ ಮಹಾಕಾಳೇಶ್ವರ ದೇವಾಲಯ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸಲಿದ್ದಾರೆ.‌ ಈ  ಯೋಜನೆಗೆ ʼಮಹಾಕಾಲ್‌ ಲೋಕ್‌ʼ ಎಂದು ಹೆಸರಿಸಲಾಗಿದೆ.

‘ಮಹಾಕಾಲ್ ಲೋಕ್’ದ ಭವ್ಯ ಗೇಟ್‌ವೇ ನಂದಿ ದ್ವಾರದಲ್ಲಿ ದೊಡ್ಡ ಗಾತ್ರದ ಶಿವಲಿಂಗವನ್ನು ಇರಿಸಲಾಗಿದೆ. ಯೋಜನೆಯ ಪ್ರಕಾರ, ಮೆಗಾ ಕಾರಿಡಾರ್‌ನ ಉದ್ಘಾಟನೆಯನ್ನು ಸಾಂಕೇತಿಕವಾಗಿ ಗುರುತಿಸಲು ಪ್ರಧಾನಮಂತ್ರಿ ಅವರು ಶಿವಲಿಂಗವನ್ನು ಅಧಿಕೃತವಾಗಿ ಅನಾವರಣಗೊಳಿಸಲಿದ್ದಾರೆ.

ಹೊಸ ಕಾರಿಡಾರ್ 900 ಮೀಟರ್‌ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದ್ದು, ಸಾಲಾಗಿ 108 ಅಲಂಕೃತ ಮರಳುಗಲ್ಲು ಸ್ತಂಭಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಅಲಂಕಾರಿಕ ‘ತ್ರಿಶೂಲ’ ವಿನ್ಯಾಸವನ್ನು ಮತ್ತು ಅದರ ಮುಖದ ಮೇಲೆ ಶಿವನ ‘ಮುದ್ರೆಗಳನ್ನು’ ಹೊಂದಿದೆ. ಇದು ದೇವತೆಯ ಕಲಾತ್ಮಕ ಶಿಲ್ಪಗಳಿಂದ ಸುತ್ತುವರೆದಿರುವ ಚಿಮ್ಮುವ ಕಾರಂಜಿಗಳು ಮತ್ತು ಶಿವ ಪುರಾಣದ ಕಥೆಗಳನ್ನು ಚಿತ್ರಿಸುವ 53 ಪ್ರಕಾಶಿತ ಭಿತ್ತಿಚಿತ್ರಗಳನ್ನು ಹೊಂದಿದೆ.

ಅಕ್ಟೋಬರ್ 11 ರಂದು ಸಂಜೆ 5:30 ರ ಸುಮಾರಿಗೆ ಪ್ರಧಾನಿ ಮೋದಿ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ ಎಂದು ಮಧ್ಯಪ್ರದೇಶ  ಸಚಿವ ಭೂಪೇಂದ್ರ ಸಿಂಗ್ ಈ ಹಿಂದೆ ಹೇಳಿದ್ದರು.

”ಪ್ರಧಾನಿ ಅವರು ಜನರಿಗೆ ಸಮರ್ಪಿಸಲಿರುವ ‘ಮಹಾಕಾಲ್ ಲೋಕ್‌ʼ ಉದ್ಘಾಟನೆಗೆ ಮೆಗಾ ವ್ಯವಸ್ಥೆ ಮಾಡಲಾಗಿದೆ. ಉಜ್ಜಯಿನಿ ತಲುಪಿದ ನಂತರ ಮೋದಿ ತಮ್ಮ ಮೋಟಾರು ವಾಹನದಲ್ಲಿ ದೇವಾಲಯದ ಸಂಕೀರ್ಣಕ್ಕೆ ತೆರಳುತ್ತಾರೆ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ‘ಪೂಜೆ’ ನೆರವೇರಿಸುತ್ತಾರೆ.

ನಂತರ ಅವರು ನಂದಿ ದ್ವಾರಕ್ಕೆ ತೆರಳಿ ಕಾರಿಡಾರ್‌ ಉದ್ಘಾಟನೆ ಮಾಡಲಿದ್ದಾರೆ ಎಂದು ಯೋಜನೆಯನ್ನು ಅನುಷ್ಠಾನಗೊಳಿಸಿರುವ ಉಜ್ಜಯಿನಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾಕಾಳೇಶ್ವರ ದೇವಾಲಯವು ದೇಶದ 12 ‘ಜ್ಯೋತಿರ್ಲಿಂಗ’ಗಳಲ್ಲಿ ಒಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top