News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಯೋಧ್ಯೆಯಿಂದ ಹೊರಟಿದೆ 60 ದಿನಗಳ ಶ್ರೀ ರಾಮ ದಿಗ್ವಿಜಯ ರಥಯಾತ್ರೆ

ಅಯೋಧ್ಯೆ: ರಾಮನ ಜನ್ಮಭೂಮಿ ಅಯೋಧ್ಯಾದಿಂದ  ಶ್ರೀ ರಾಮ ದಿಗ್ವಿಜಯ್ ರಥಯಾತ್ರೆ ಆರಂಭಗೊಂಡಿದ್ದು, ಇದು 27 ರಾಜ್ಯಗಳು, 15 ಸಾವಿರ ಕಿಲೋಮೀಟರ್, 60 ದಿನಗಳ ಕಾಲ ಯಾತ್ರೆ ನಡೆಸಲಿದೆ ಮತ್ತು ಕೊನೆಗೆ ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಲಿದೆ. ನಿನ್ನೆ ದಸರೆಯ ಶುಭ ಸಂದರ್ಭದಲ್ಲಿ  ಶ್ರೀ ರಾಮ್ ದಿಗ್ವಿಜಯ್ ರಥ ಯಾತ್ರೆಯು ವೇದ ಪಠಣ ಮತ್ತು ಶ್ರೀ ರಾಮ್ ದರ್ಬಾರ್‌ನ ಪೂಜೆಯೊಂದಿಗೆ ಅಯೋಧ್ಯಾದಿಂದ ಗೋರಖ್‌ಪುರಕ್ಕೆ ಹೊರಟಿದೆ.

 ಇದೇ ಸಂದರ್ಭದಲ್ಲಿ ರುದ್ರಾಕ್ಷ ವೃಕ್ಷ ನೆಡಲಾಯಿತು ಹಾಗೂ ಗೋಪೂಜೆ ನೆರವೇರಿಸಲಾಯಿತು.

ವಿಎಚ್‌ಪಿ ಮಾಧ್ಯಮ ಉಸ್ತುವಾರಿ ಶರದ್ ಶರ್ಮಾ ಪ್ರಕಾರ, ಕರಸೇವಕಪುರಂನಲ್ಲಿ ಆಯುಧ ಪೂಜೆ ನಡೆಸಲಾಯಿತು. ಬೆಳಗಿನ ಮುಹೂರ್ತದ ಪ್ರಕಾರ ಶ್ರೀರಾಮ ವೇದ ವಿದ್ಯಾಲಯದ ಪ್ರಾಂಶುಪಾಲರಾದ ಪಂಡಿತ್ ಇಂದ್ರ ದೇವ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಈ ಕಾರ್ಯವನ್ನು ಮಾಡಿದರು. ಸಾಮಾಜಿಕ ಸಮನ್ವಯದೊಂದಿಗೆ ಭಗವಾನ್ ಶ್ರೀರಾಮನ ಶೌರ್ಯವನ್ನು ಒಪ್ಪಿಕೊಳ್ಳುವ ಮೂಲಕ ಸಮಾಜವು ತನ್ನ ಮತ್ತು ರಾಷ್ಟ್ರದ ಭದ್ರತೆಯಲ್ಲಿ ಭಾಗಿಗಳಾಗಬಹುದು ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಉಪಾಧ್ಯಕ್ಷ ಚಂಪತ್ ರಾಯ್‌ ಈ ವೇಳೆ ಕರೆ ನೀಡಿದ್ದಾರೆ. ಭಗವಾನ್ ಶ್ರೀರಾಮನ ಕಾರ್ಯವು ಯಾವಾಗಲೂ ಅಸತ್ಯವನ್ನು ಸೋಲಿಸುವ ಮೂಲಕ ಸತ್ಯದ ವಿಜಯದ ರೂಪದಲ್ಲಿರುತ್ತದೆ ಎಂದಿದ್ದಾರೆ.

ಗೋರಖ್‌ಪುರ, ಗೋಪಾಲ್‌ಗಂಜ್, ಸೀತಾಮರ್ಹಿ, ಜನಕ್‌ಪುರ, ಕಠ್ಮಂಡು ಮೂಲಕ ಅಯೋಧ್ಯೆಯಲ್ಲಿ ಯಾತ್ರೆ ಕೊನೆಗೊಳ್ಳುತ್ತದೆ

ಶ್ರೀ ರಾಮದಾಸ್ ಮಿಷನ್‌ನ ದಿಗ್ವಿಜಯ್ ರಥಯಾತ್ರೆಯು ನೆರೆಯ ರಾಷ್ಟ್ರವಾದ ನೇಪಾಳ ಮತ್ತು ಭಾರತದ ಒಟ್ಟು 27 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ರಥಯಾತ್ರೆಯು 60 ದಿನಗಳಲ್ಲಿ 15 ಸಾವಿರ ಕಿಮೀ ದೂರವನ್ನು ಕ್ರಮಿಸುತ್ತದೆ. ಅಯೋಧ್ಯೆಗೆ ಮರಳಿದ ನಂತರ ಗೀತಾ ಜಯಂತಿಯಂದು ರಥಯಾತ್ರೆ ಮುಕ್ತಾಯವಾಗಲಿದೆ.

ಶ್ರೀರಾಮನ ದಿಗ್ವಿಜಯ್ ಯಾತ್ರೆಯ ಮೂಲಕ, ಭಾರತವನ್ನು ಭಾರತವೆಂದು ಘೋಷಿಸಲು, ಭಾರತೀಯ ಶಿಕ್ಷಣದಲ್ಲಿ ರಾಮಾಯಣ ಮತ್ತು ನೈಜ ಇತಿಹಾಸವನ್ನು ಸೇರಿಸಲು ಸರ್ಕಾರದಿಂದ ಬೇಡಿಕೆ ಇಡಲಾಗುತ್ತದೆ. ಅಶ್ವಮೇಧ ಯಾಗದ ಮಾದರಿಯಲ್ಲಿ ಲೋಕಕಲ್ಯಾಣಕ್ಕಾಗಿ ದಿಗ್ವಿಜಯ್ ಯಾತ್ರೆ ನಡೆಸಲಾಗುತ್ತಿದೆ. ರಾಮರಾಜ್ಯ ರಥ ಯಾತ್ರೆಯು ಅಯೋಧ್ಯೆಯಿಂದ ಗೋರಖ್‌ಪುರ, ಗೋಪಾಲ್‌ಗಂಜ್, ಸೀತಾಮರ್ಹಿ, ಜನಕ್‌ಪುರ, ಕಠ್ಮಂಡು ಮೂಲಕ ಮತ್ತೆ ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ ಎಂದು ಶ್ರೀ ರಾಮದಾಸ್ ಮಿಷನ್‌ನ ರಾಷ್ಟ್ರೀಯ ವಕ್ತಾರ ಶ್ರೀ ಶಕ್ತಿ ಶಾಂತಾನಂದ ಮಾನುಷಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top