ಗೋರಖ್ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಗೋರಖ್ಪುರದಲ್ಲಿ ನವರಾತ್ರಿಯ ಒಂಬತ್ತನೇ ದಿನವಾದ ‘ನವಮಿ’ ಸಂದರ್ಭದಲ್ಲಿ ‘ಕನ್ಯಾ ಪೂಜೆ’ ನೆರವೇರಿಸಿದರು.
ಇದಕ್ಕೂ ಮುನ್ನ ಅವರು ಮಹಾ ಅಷ್ಟಮಿಯಂದು “ಮಾತೆ ಭಗವತಿ” ಪೂಜೆಯನ್ನು ನೆರವೇರಿಸಿದ್ದರು.
ಭಾನುವಾರ ಸಂಜೆಯಿಂದ ಗೋರಖ್ಪುರಕ್ಕೆ ಆಗಮಿಸಿರುವ ಆದಿತ್ಯನಾಥ್ ಅವರು ಭಗವತಿ ದೇವಿಯ ಎಂಟನೇ ರೂಪವಾದ ಮಾತಾ ಮಹಾಗೌರಿಯ ಪೂಜೆಯನ್ನು ನೆರವೇರಿಸಿದರು ಮತ್ತು ಸಂಜೆ ಗೋರಖನಾಥದ ಮೊದಲ ಮಹಡಿಯಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಮಾತೆಯ ಒಂಬತ್ತನೇ ರೂಪವಾದ ಮಾತೆ ಸಿದ್ಧಿದಾತ್ರಿಯ ಪೂಜೆಯನ್ನು ನೆರವೇರಿಸಿದರು.
ಎರಡೂ ಪೂಜೆಗಳ ಸಮಯದಲ್ಲಿ, ಆದಿತ್ಯನಾಥ್ ಜನರ ಯೋಗಕ್ಷೇಮ, ಶಾಂತಿ ಮತ್ತು ಸಮೃದ್ಧಿಗಾಗಿ ಹಾರೈಸಿದರು ಎಂದು ವರದಿಗಳು ತಿಳಿಸಿವೆ.
Chief Minister Yogi Adityanath performs 'Kanya Pujan' on the occasion of 'Navmi', the ninth day of Navratri, in Gorakhpur pic.twitter.com/cePP2j1B4O
— ANI UP/Uttarakhand (@ANINewsUP) October 4, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.