ಇಟಾನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಎರಡು ದಿನಗಳ ಅರುಣಾಚಲ ಪ್ರದೇಶದ ಗಡಿಯಲ್ಲಿನ ಸೇನಾ ರಚನೆಗಳಿಗೆ ಭೇಟಿ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದರು. ರಕ್ಷಣಾ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಪೂರ್ವ ಕಮಾಂಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆರ್ ಪಿ ಕಲಿತಾ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು.
ಈ ವೇಳೆ ಮಾತನಾಡಿದ ಸಿಂಗ್, “2014 ರಿಂದ ಅಧಿಕಾರಕ್ಕೆ ಬಂದಾಗಿನಿಂದ ಭಾರತದ ಮಿಲಿಟರಿ ಪರಾಕ್ರಮವನ್ನು ಬಲಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ, ‘ಆತ್ಮನಿರ್ಭರ್’ ರಕ್ಷಣಾ ಉದ್ಯಮದ ಮೂಲಕ ಸೇವೆಗಳನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳು /ಸಲಕರಣೆಗಳೊಂದಿಗೆ ಸಜ್ಜುಗೊಳಿಸುವತ್ತ ಗಮನಹರಿಸಲಾಗಿದೆ” ಎಂದರು
ಗುರುವಾರ ಅವರು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯಲ್ಲಿ ಸೇನಾ ಯೋಧರೊಂದಿಗೆ ಸಂವಾದ ನಡೆಸಿದರು ಮತ್ತು ತೇಜ್ಪುರದ ಸೋಲ್ಮಾರಾ ಮಿಲಿಟರಿ ನಿಲ್ದಾಣದಲ್ಲಿ ಬಡಾ ಖಾನಾದಲ್ಲಿ ಸೇನಾ ಸಿಬ್ಬಂದಿಯ ಜೊತೆಗೂಡಿದರು.
ಅವರ ಭೇಟಿಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಫಾರ್ವರ್ಡ್ ಸ್ಥಳಗಳಿಗೆ ಸೀಮಿತವಾಗಿದೆ.
ಸರ್ಕಾರದ ಪ್ರಯತ್ನಗಳು ಎಲ್ಲಾ ರೀತಿಯ ಬೆದರಿಕೆಗಳಿಂದ ರಾಷ್ಟ್ರವನ್ನು ರಕ್ಷಿಸುವ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿರುವ ಬಲಿಷ್ಠ ಮಿಲಿಟರಿಯನ್ನು ಸಿದ್ಧಪಡಿಸಲು ಕಾರಣವಾಗಿವೆ. ಸಶಸ್ತ್ರ ಪಡೆಗಳು ಕಾಲಕಾಲಕ್ಕೆ ತಮ್ಮ ಶಕ್ತಿ ಮತ್ತು ಧೈರ್ಯವನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ, ವಿಶೇಷವಾಗಿ ಯುವಕರಲ್ಲಿ ರಾಷ್ಟ್ರೀಯ ಹೆಮ್ಮೆ ಮತ್ತು ದೇಶಪ್ರೇಮದ ಭಾವನೆಯನ್ನು ತುಂಬುತ್ತಿವೆ ಎಂದರು.
How pleasing to see Mananiya Raksha Mantri Shri @rajnathsingh Ji attired in Mishmi dress being welcomed by Army jawans with the song 'Maa Tujhe Salaam' in Dibang Valley, today.
His presence has boosted the morale of brave soldiers protecting our borders. @adgpi
Video: @ANI pic.twitter.com/mZrJVEsrKL
— Pema Khandu པདྨ་མཁའ་འགྲོ་། (@PemaKhanduBJP) September 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.