ಬೆಂಗಳೂರು: ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆಯ ರಾಗ ಮತ್ತು ಅವಧಿಯ ಕುರಿತು ರಾಜ್ಯ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ.
ಕುವೆಂಪು ವಿರಚಿತ ನಾಡಗೀತೆ “ಜಯಭಾರತ ಜನನಿಯ ತನುಜಾತೆ” ಗೆ ರಾಜ್ಯ ಸರ್ಕಾರ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.
ಈ ಹಿಂದೆಯೂ ನಾಡಗೀತೆಯ ಅವಧಿಯನ್ನು ಮಿತಿಗೊಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು ಆದರೆ ಅದು ಹಾಗೆಯೇ ಉಳಿದುಹೋಗಿತ್ತು. ಇದೀಗ ನಾಡಗೀತೆಯ ಅವಧಿಯನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ಗಳಿಗೆ ಮಿತಿಗೊಳಿಸಲು ಸರ್ಕಾರ ತನ್ನ ಒಪ್ಪಿಗೆ ನೀಡಿದೆ.
ದಿವಂಗತ ಮೈಸೂರು ಅನಂತಸ್ವಾಮಿ ಅವರು ರಚಿಸಿದ ರಾಗದಲ್ಲಿಯೇ ಹಾಡನ್ನು ಹಾಡಲಾಗುವುದು. ಖ್ಯಾತ
ಕವಿ ಕುವೆಂಪು ಅವರು ಬರೆದ ನಾಡಗೀತೆಯನ್ನು 2004 ರಲ್ಲಿ ಅಧಿಕೃತವಾಗಿ ರಾಜ್ಯಗೀತೆ ಎಂದು ಘೋಷಿಸಲಾಯಿತು.
ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಹಾಡಿನ ನಿರೂಪಣೆಯು 7-8 ನಿಮಿಷಗಳವರೆಗೆ ಇರುತ್ತದೆ. ದಿವ್ಯಾಂಗ ಅಥವಾ ವಯಸ್ಸಾದ ಜನರಿಗೆ ದೀರ್ಘಾವಧಿಯವರೆಗೆ ನಿಲ್ಲಲು ಕಷ್ಟವಾಗಬಹುದು ಎಂಬ ಕಳವಳದೊಂದಿಗೆ ಅದರ ಅವಧಿಯನ್ನು ಮಿತಿಗೊಳಿಸಲು ಮತ್ತು ಗಾಯನ ಶೈಲಿಯಲ್ಲಿ ಏಕರೂಪತೆಗಾಗಿ ಬೇಡಿಕೆಗಳನ್ನು ಇಡಲಾಗಿತ್ತು.
ಕುವೆಂಪು ವಿರಚಿತ ನಾಡಗೀತೆ"ಜಯಭಾರತ ಜನನಿಯ ತನುಜಾತೆ" ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ.
ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ. pic.twitter.com/GQSzmZbd2m— Sunil Kumar Karkala (@karkalasunil) September 23, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.