ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಂಟು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಗಳಿಗೆ ನಿರ್ದೇಶಕರ ನೇಮಕಾತಿಯನ್ನು ಅನುಮೋದಿಸಿದ್ದಾರೆ.
ಐಐಟಿ ಮದ್ರಾಸ್ ಪ್ರೊಫೆಸರ್ ಶೇಷಾದ್ರಿ ಶೇಖರ್ ಅವರನ್ನು ಐಐಟಿ ಪಾಲಕ್ಕಾಡ್ನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಮತ್ತು ಇನ್ನೊಬ್ಬ ಐಐಟಿ ಮದ್ರಾಸ್ ಪ್ರೊಫೆಸರ್ ಶ್ರೀಪಾದ್ ಕರ್ಮಾಲ್ಕರ್ ಅವರನ್ನು ಐಐಟಿ ಭುವನೇಶ್ವರ್ನ ಹೊಸ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಐಐಟಿ ಖರಗಪುರದ ವೆಂಕಯಪ್ಪಯ್ಯ ಆರ್.ದೇಸಾಯಿ ಅವರನ್ನು ಐಐಟಿ ಧಾರವಾಡ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಐಐಟಿ ಧಾರವಾಡ ನಿರ್ದೇಶಕ ಪಸುಮೃತಿ ಶೇಷು ಅವರಿಗೆ ಗೋವಾದ ಐಐಟಿ ನಿರ್ದೇಶಕರ ಜವಾಬ್ದಾರಿ ನೀಡಲಾಗಿದೆ.
ಐಐಟಿ ಭಿಲಾಯಿ ನಿರ್ದೇಶಕ ರಜತ್ ಮೂನಾ ಅವರನ್ನು ಐಐಟಿ ಗಾಂಧಿನಗರದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಕೆ.ಎನ್.ಸತ್ಯನಾರಾಯಣ ತಿರುಪತಿಯ ಐಐಟಿ ನಿರ್ದೇಶಕರಾಗಿ, ರಾಜೀವ್ ಪ್ರಕಾಶ್ ಭಿಲಾಯ್ ಐಐಟಿ ನಿರ್ದೇಶಕರಾಗಿ, ಮನೋಜ್ ಸಿಂಗ್ ಗೌರ್ ಜಮ್ಮುವಿನ ಐಐಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.