ನವದೆಹಲಿ: ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫಿಟ್ ಇಂಡಿಯಾ ಫ್ರೀಡಂ ಮೋಟೋ ರೈಡ್ಗೆ ಚಾಲನೆ ನೀಡಿದರು
ಇದು ರಾಷ್ಟ್ರಮಟ್ಟದ ಬೈಕ್ ರೈಡ್ ಆಗಿದ್ದು, 75 ಬೈಕ್ ಸವಾರರು ದೇಶದ 75 ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅಜಾದಿ ಕಾ ಅಮೃತ ಮಹೋತ್ಸವದ ಸಂದೇಶವನ್ನು ಸಾರಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ದೇಶಭಕ್ತಿಯಿಂದ ಆಚರಿಸುತ್ತಿದೆ. ಪ್ರಧಾನಮಂತ್ರಿಯವರು ಈ ಕಾರ್ಯಕ್ರಮವನ್ನು ಕೇವಲ ಸ್ವಾತಂತ್ರ್ಯದ ನೆನಪುಗಳೊಂದಿಗೆ ಮಾತ್ರ ಜೋಡಿಸದೆ ಬಹು ಆಯಾಮಗಳೊಂದಿಗೆ ಜೋಡಿಸಿದ್ದಾರೆ ಎಂದಿದ್ದಾರೆ.
ಆಜಾದಿ ಕಾ ಅಮೃತ್ ಮಹೋತ್ಸವದ ದೂರಗಾಮಿ ಪರಿಣಾಮಗಳನ್ನು ಹರ್ ಘರ್ ತಿರಂಗಾ ಅಭಿಯಾನದ ಸಮಯದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ದೇಶಭಕ್ತಿಯ ಅಲೆಯಿದ್ದಾಗ ನೋಡಲಾಗಿದೆ ಎಂದು ಶಾ ಹೇಳಿದರು. ಆಜಾದಿ ಕಾ ಅಮೃತ್ ಮಹೋತ್ಸವದ ಉದ್ದೇಶವು ಯುವಕರು ಮತ್ತು ಮಕ್ಕಳಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಿಸುವುದು ಎಂದು ಅವರು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಆದರೆ ಇತಿಹಾಸವು ಅವರನ್ನು ಮರೆತಿದೆ ಮತ್ತು ಯುವಕರಿಗೆ ತೆರಮರೆ ವೀರರ ಸಾಹಸಗಾಥೆಯನ್ನು ಗೊತ್ತುಪಡಿಸುವುದು ನ,, ಗುರಿಯಾಗಿದೆ ಎಂದು ಶಾ ಹೇಳಿದರು. ಸ್ವಾತಂತ್ರ್ಯದ 75 ವರ್ಷದಿಂದ 100 ವರ್ಷಗಳವರೆಗೆ ಈ ಅಮೃತ ಕಾಲದಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿರಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಆಜಾದಿ ಕಾ ಅಮೃತ ಮಹೋತ್ಸವದ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು.
ಫಿಟ್ ಇಂಡಿಯಾ ಫ್ರೀಡಂ ಮೋಟೋ ರೈಡ್ ಜನರಿಗೆ ವಿಶೇಷವಾಗಿ ದೇಶದ ಯುವಕರಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಫಿಟ್ ಇಂಡಿಯಾ ಸಂದೇಶವನ್ನು ನೀಡುತ್ತದೆ ಎಂದು ಗೃಹ ಸಚಿವರು ಹೇಳಿದರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಸಂಸದರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫಿಟ್ ಇಂಡಿಯಾ ಫ್ರೀಡಂ ಮೋಟೋ ರೈಡ್ಗೆ ಚಾಲನೆ ನೀಡಿದರು.ರಾಷ್ಟ್ರಮಟ್ಟದ ಬೈಕ್ ರೈಡ್ ಆಗಿದ್ದು, 75 ಬೈಕ್ ಸವಾರರು ದೇಶದ 75 ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅಜಾದಿ ಕಾ ಅಮೃತ ಮಹೋತ್ಸವದ ಸಂದೇಶವನ್ನು ಸಾರಲಿದ್ದಾರೆ.@AmitShah pic.twitter.com/DxV1HL98uo
— DD Chandana News (@DDChandanaNews) September 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.