ಗುವಾಹಟಿ: ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ಮದರಸಾವನ್ನು ಸಾರ್ವಜನಿಕರು ಧ್ವಂಸಗೊಳಿಸಿದ ಒಂದು ದಿನದ ನಂತರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಎಲ್ಲಾ ಕೆಡವಲಾದ ಮದರಸಾಗಳು ನಿಜವಾಗಿ ಮದರಸಾಗಳಾಗಿರಲಿಲ್ಲ ಬದಲಿಗೆ ಅವು ಅಲ್-ಖೈದಾ ಕಚೇರಿಗಳಾಗಿದ್ದವು ಎಂದು ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶರ್ಮಾ, ಎಲ್ಲಾ ಕೆಡವಲಾದ ಮದರಸಾಗಳು ಮದರಸಾಗಳಲ್ಲ, ಅಲ್ ಖೈದಾ ಕಚೇರಿಗಳು. ನಾವು 2-3 ಅಂತಹ ಕಛೇರಿಗಳನ್ನು ಕೆಡವಿದ್ದೇವೆ ಮತ್ತು ಈಗ ಸಾರ್ವಜನಿಕರು ಇತರವುಗಳನ್ನು ಕೆಡವಲು ಮುಂದೆ ಬರುತ್ತಿದ್ದಾರೆ. ಅಲ್ ಖೈದಾದ ಕೆಲಸ ನಡೆಯುವ ಮದರಸಾ ಬೇಡ ಎಂದು ಮುಸ್ಲಿಂ ಸಮುದಾಯದವರು ಕೂಡ ಕೆಡವಲು ಮುಂದೆ ಬರುತ್ತಿದ್ದಾರೆ ಎಂದಿದ್ದಾರೆ.
ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಪಖುರಿಯಾ ಚಾರ್ನ ಸ್ಥಳೀಯ ನಿವಾಸಿಗಳು ಮಂಗಳವಾರ ಮದರಸಾವನ್ನು ನೆಲಸಮಗೊಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಧರ್ಮಗುರುವನ್ನು ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ, ಈ ಬೆಳವಣಿಗೆ ನಂತರ ಮುಖ್ಯಮಂತ್ರಿಯ ಹೇಳಿಕೆ ಬಂದಿದೆ.
“ಸ್ಥಳೀಯರು ಮದರಸಾವನ್ನು ಕೆಡವಲು ಮುಂದಾದರು. ಅದರಲ್ಲಿ ಸರ್ಕಾರ ಭಾಗಿಯಾಗಿಲ್ಲ. ಬಂಧಿತ ಜಿಹಾದಿ ಮದರಸಾದಲ್ಲಿ ಶಿಕ್ಷಕನಾಗಿರುವುದು ಅಚ್ಚರಿ ಮೂಡಿಸಿದೆ. ಜನರು ಜಿಹಾದಿ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ನೀಡಿದ್ದಾರೆ” ಎಂದು ಗೋಲ್ಪಾರಾ ಪೊಲೀಸ್ ವರಿಷ್ಠಾಧಿಕಾರಿ ವಿವಿ ರಾಕೇಶ್ ರೆಡ್ಡಿ ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ, ನಾಲ್ಕು ಮದರಸಾಗಳನ್ನು ಕೆಡವಲಾಗಿದ್ದು, ಮೊದಲ ಮೂರನ್ನು ಸರ್ಕಾರಿ ಅಧಿಕಾರಿಗಳು ಕೆಡವಿದ್ದಾರೆ. ಒಂದು ಮದರಸವನ್ನು ಸ್ಥಳಿಯರು ಕೆಡವಿ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.