ಬೆಂಗಳೂರು: ಐ-ಬ್ಯಾಟ್ – ದಿ ಥಿಂಕ್ ಟ್ಯಾಂಕ್ ಆಗಸ್ಟ್ 27ರಂದು ಗುರುಗ್ರಾಮ್ನ ಹಯಾಟ್ ರೀಜೆನ್ಸಿಯಲ್ಲಿ ನಡೆದ ಇಂಡಿಯನ್ ಸಿಎಸ್ಆರ್ ಅವಾರ್ಡ್ಸ್ 2022 ರಲ್ಲಿ ಪ್ರತಿಷ್ಠಿತ “ದಿ ಥಿಂಕ್ ಟ್ಯಾಂಕ್ ವಿತ್ ಹೈ ಸೋಶಿಯಲ್ ಇಂಪ್ಯಾಕ್ಟ್-2022” ಪ್ರಶಸ್ತಿಯನ್ನು ಸ್ವೀಕರಿಸಿದೆ.
ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಭಾರತದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ, ಡಾ ಕಿರಣ್ ಬೇಡಿ ಮತ್ತು ಇಂಡಿಯಾ ಟಿವಿ, ಅಧ್ಯಕ್ಷ ಹಾಗೂ ಮುಖ್ಯ ಸಂಪಾದಕ ರಜತ್ ಶರ್ಮಾ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು. ಐ-ಬ್ಯಾಟ್ ಪರವಾಗಿ ಚಿಂತಕರ ಚಾವಡಿ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಡಾ.ದಶರಥರಾಜ್ ಕೆ ಶೆಟ್ಟಿ, ಉಪಾಧ್ಯಕ್ಷ ಡಾ.ಬಾಲಕೃಷ್ಣ ಮದ್ದೋಡಿ, ಸುಧೀರ್ ಕುಮಾರ್, ಡಾ.ಜಯರಾಜ್ ಎಂಬಿ. ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಖ್ಯಾತ ಸಂಶೋಧಕ ಮತ್ತು ನಿರ್ವಹಣಾ ಗುರು ಡಾ.ದಶರಥರಾಜ್ ಕೆ. ಶೆಟ್ಟಿ, “ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆ ತಂದಿದೆ. ತಂಡವು ವರ್ಷಗಳಿಂದ ಸಮಾಜದ ಬೆಳವಣಿಗೆಗೆ ಪಟ್ಟ ಶ್ರಮಕ್ಕೆ ಇದು ಸಾಕ್ಷಿಯಾಗಿದೆ. ಸಂಸ್ಥೆಯನ್ನು ಮತ್ತು ನಮ್ಮ ಕೆಲಸವನ್ನು ಮುಂದಕ್ಕೆ ಮತ್ತು ಮೇಲಕ್ಕೆ ಕೊಂಡೊಯ್ಯಲು ಇದು ನಮ್ಮನ್ನು ಪ್ರೋತ್ಸಾಹಿಸುತ್ತದೆ. ನಾನು ಈ ಪ್ರಶಸ್ತಿಯನ್ನು ನನ್ನ ಇಡೀ ತಂಡಕ್ಕೆ ಸಮರ್ಪಿಸಲು ಬಯಸುತ್ತೇನೆ ಮತ್ತು ಅದನ್ನು ಗುರುತಿಸಿದ್ದಕ್ಕಾಗಿ ತೀರ್ಪುಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ನುಡಿದರು.
ಭಾರತೀಯ ಸಿ.ಎಸ್.ಆರ್. ಅವಾರ್ಡ್ಸ್ 2022 ಕಾರ್ಯಕ್ರಮವು ಮಾನವೀಯತೆ ಮತ್ತು ರಾಷ್ಟ್ರ-ನಿರ್ಮಾಣಕ್ಕಾಗಿ ತಮ್ಮ ಕೊಡುಗೆಗಳ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ಮತ್ತು ವೈಭವವನ್ನು ತಂದ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸಿತು ಮತ್ತು ಉತ್ತಮ ನಾಳೆಗಾಗಿ ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ.
ಈ ವಾರ್ಷಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು, ಆಯಾ ಕ್ಷೇತ್ರಗಳ ವಿಜೇತರು, ಅತಿಥಿಗಳು, ಮತ್ತು ನಾಯಕರು ಉಪಸ್ಥಿತರಿದ್ದರು .
ಐ-ಬ್ಯಾಟ್ (www.i-bat.in) ಎನ್ನುವುದು ಆಡಳಿತಕ್ಷೇತ್ರ (ಸಾಮಾನ್ಯ ಮತ್ತು ನಿರ್ದಿಷ್ಟ), ಸಾಮಾಜಿಕ ನೀತಿ, ಅರ್ಥಶಾಸ್ತ್ರ, ಭೂರಾಜಕೀಯ, ತಂತ್ರಜ್ಞಾನ ಮತ್ತು ಸಂಸ್ಕೃತಿಯಂತಹ ವಿಷಯಗಳ ಕುರಿತು ಸಂಶೋಧನೆ ಮತ್ತು ಸಮರ್ಥನೆಯನ್ನು ನಿರ್ವಹಿಸುವ ಒಂದು ಚಿಂತಕರ ಚಾವಡಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.