ಕೊಚ್ಚಿ: ಕೊನೆಗೂ ಭಾರತದ ನೌಕಾಸೇನೆ ಹೊಸ ಧ್ವಜವನ್ನು ಪಡೆದಿದೆ. ಈ ಮೂಲಕ ಬ್ರಿಟಿಷ್ ಕಾಲದ ಧ್ವಜಕ್ಕೆ ತಿಲಾಂಜಲಿ ನೀಡಲಾಗಿದೆ. ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಲೋಪಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ವೇಳೆ, ನೌಕಾಪಡೆಯ ಹೊಸ ಧ್ವಜವನ್ನು ಅವರು ಅನಾವರಣಗೊಳಿಸಿದರು.
ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲು ನೌಕಾಪಡೆ ಲಾಂಛನವನ್ನು ಬದಲಾಯಿಸಲಾಗಿದೆ. ಭಾರತೀಯ ಕಡಲ ಪರಂಪರೆಗೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದೆ.
ನೌಕಾಧ್ವಜಕ್ಕೆ ನಿಶಾನ್ ಎಂದು ಹೆಸರಿಡಲಾಗಿದ್ದು, ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಉತ್ತೇಜನ ಉದ್ದೇಶದಿಂದ ಹೊಸ ಧ್ವಜವನ್ನು ತಯಾರಿಸಲಾಗಿದೆ.
ನೌಕಾಪಡೆಯ ಧ್ವಜದಲ್ಲಿ ಇಲ್ಲಿಯವರೆಗೆ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. 2001 ರಿಂದ 2004 ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಧ್ವಜದಲ್ಲಿದ್ದ ಅಡ್ಡ ಚಿಹ್ನೆಯನ್ನು ತೆಗೆದುಹಾಕಲಾಯಿತು. ಆದರೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಕೇಂದ್ರದ ಅಧಿಕಾರಕ್ಕೆ ಬಂದ ನಂತರ ಅದನ್ನು ಮರಳಿ ತಂದಿತ್ತು.
ನೌಕಾಪಡೆಯ ಹಳೆ ಧ್ವಜವು ಬಿಳಿ ಬಣ್ಣದಲ್ಲಿದೆ. ಲಂಬ ಮತ್ತು ಅಡ್ಡ ಕೆಂಪು ಪಟ್ಟಿಗಳನ್ನು ಹೊಂದಿದೆ. ಇದು ಸೆಂಟ್ ಜಾರ್ಜ್ ಶಿಲುಬೆಯನ್ನು ಸಂಕೇತಿಸುತ್ತದೆ. ಆದರೆ, ಇದೀಗ ಹೊರ ತರಲಾದ ಹೊಸ ಧ್ವಜ ಅಶೋಕ ಚಿಹ್ನೆಯನ್ನು ಹೊಂದಿದ್ದು, ಅದರ ಕೆಳಗೆ ಸತ್ಯಮೇಯ ಜಯತೇ ಎಂದು ಬರೆಯಲಾಗಿದೆ. ಜೊತೆಗೆ, ಮೇಲಿನ ಮೂಲೆಯಲ್ಲಿ ತ್ರಿವರ್ಣವಿದೆ. ಬ್ರಿಟಿಷರ ಕಾಲದ ಸಂಕೇತವಾಗಿರುವ ನೌಕಾಪಡೆಯ ಧ್ವಜದಲ್ಲಿರುವ ಶಿಲುಬೆಯನ್ನು ತೆಗೆದು ಹಾಕಲಾಗಿದೆ.
Hon’ble PM @narendramodi unveils the new #naval ensign making 02 Sep 2022 as a momentous day in the history of #IndianNavy#HarKaamDeshKeNaam@DefenceMinIndia@Indiannavy pic.twitter.com/eu3BpmWQfX
— IN (@IndiannavyMedia) September 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.