ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಕೈಗೆ ಸೆರೆ ಸಿಕ್ಕಿರುವ ಉಗ್ರನೊಬ್ಬ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿಯನ್ನು ನಡೆಸುವ ಸಲುವಾಗಿ ನನಗೆ ಪಾಕಿಸ್ಥಾನದ ಸೇನಾ ಕರ್ನಲ್ ಯೂನಿಸ್ 30,000ಗಳನ್ನು ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೇ ಭಾರತದಲ್ಲಿ ದುಷ್ಕೃತ್ಯವನ್ನು ನಡೆಸಲು ಇತರ ನಾಲ್ಕೈದು ಮಂದಿಯೊಂದಿಗೆ ಭಾರತಕ್ಕೆ ಆಗಮಿಸಿರುವುದಾಗಿ ಹೇಳಿದ್ದಾನೆ. ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಭಯೋತ್ಪಾದಕನನ್ನು ತಬರಕ್ ಹುಸೇನ್ ಎಂದು ಗುರುತಿಸಲಾಗಿದೆ. ಈತ ಆತ್ಮಹುತಿ ಬಾಂಬ್ ದಾಳಿ ನಡೆಸಲು ಭಾರತೀಯ ಸೇನೆಯ ಎರಡು ಮೂರು ನೆಲೆಗಳನ್ನು ಗುರುತಿಸಿಕೊಂಡಿದ್ದೆ ಎಂದು ಕೂಡ ಮಾಹಿತಿ ನೀಡಿದ್ದಾನೆ.
ಆಗಸ್ಟ್ 21ರಂದು ಜಮ್ಮು ಕಾಶ್ಮೀರದ ರಾಜೋರಿಯ ನೌಶೇರಾದ ಜಂಗರ್ ವಲಯದಲ್ಲಿನ ನಿಯಂತ್ರಣ ರೇಖೆಯ ಬಳಿ ಸಹಚರರೊಂದಿಗೆ ಒಳನುಸುಲಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈತನನ್ನು ಸೆರೆಹಿಡಿಯಲಾಗಿದೆ. ಈತ ಪಾಕಿಸ್ಥಾನ ಸೇನೆಯ ಗುಪ್ತಚರ ಘಟಕದಲ್ಲಿ ಕೆಲಸ ಮಾಡಿದ್ದ ಮತ್ತು ಲಷ್ಕರ್ ಇ ತೋಯ್ಪಾದ ಮಾರ್ಗದರ್ಶಿಯಾಗಿ ಕೆಲಸ ಮಾಡಿದ್ದ. ಈತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗ್ರಾಮವೊಂದರ ನಿವಾಸಿ ಎಂದು ಹೇಳಲಾಗಿದೆ.
ಈತ ಕಳೆದ ಆರು ವರ್ಷಗಳಲ್ಲಿ ಎರಡು ಬಾರಿ ಭಾರತಕ್ಕೆ ನುಸುಳಿ ಬಂದಿದ್ದ ಎಂದು ತಿಳಿದು ಬಂದಿದೆ. ಈತನ ಬಂಧನದ ಬಳಿಕ ಮತ್ತಷ್ಟು ಉಗ್ರರು ಭಾರತಕ್ಕೆ ನುಸುಳಲು ಪ್ರಯತ್ನಸುತ್ತಿರುವ ಮಾಹಿತಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.