ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾದ ಬೇಹುಗಾರಿಕೆಯ ಪ್ರಯತ್ನವನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಶ್ರೀಲಂಕಾದ ಹಂಬನ್ತೋಟ ಬಂದರಿನಲ್ಲಿ ನಿಲುಗಡೆಯಾಗಿರುವ ಚೀನಾದ ಬೇಹುಗಾರಿಕೆ ನೌಕೆ ಯುವಾನ್ ವಾಂಗ್-5 ಹೊರಸೂಸಿದ ಸಿಗ್ನಲ್ಗಳನ್ನು ತಡೆಯುವಲ್ಲಿ ಭಾರತದ ಸ್ಯಾಟಲೈಟ್ ಸಿಗ್ನಲ್ ಶೀಲ್ಡ್ ಯಶಸ್ವಿಯಾಗಿದೆ.
ಭಾರತವು ತನ್ನ ನಾಲ್ಕು ಉಪಗ್ರಹಗಳು ಮತ್ತು ಒಂದು ಸಮರ ನೌಕೆಯ ಸಹಾಯವನ್ನು ಪಡೆದುಕೊಂಡು ಚೀನಾ ನೌಕೆಯಿಂದ ಎದುರಾದ ಭದ್ರತಾ ಅಪಾಯವನ್ನು ಸಮರ್ಥವಾಗಿ ಎದುರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾದ ಬೇಹುಗಾರಿಕೆ ನೌಕೆಯು ಉಪಗ್ರಹಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಈ ನೌಕೆಯ ಮೇಲೆ ಕಣ್ಗಾವಲು ಇಡಲು ಭಾರತ ಎರಡು ಜಿಸ್ಯಾಟ್ ಉಪಗ್ರಹಗಳು, ರಿಸ್ಯಾಟ್ ಮತ್ತು ಎಮಿಸ್ಯಾಟ್ ಉಪಗ್ರಹ ಮತ್ತು ನೌಕಾಪಡೆಯ ಸಂವಹನ ಸಮರ ನೌಕೆಯನ್ನು ನಿಯೋಜಿಸಿದೆ.
ಎಮಿಸ್ಯಾಟ್ ಉಪಗ್ರಹದಲ್ಲಿರುವ ಕೌಟಿಲ್ಯ ಎಲೆಕ್ಟ್ರಾನಿಕ್ ಬೇಹುಗಾರಿಕೆ ಪ್ಯಾಕೇಜ್ ಬಳಸಿ ಚೀನಿ ನೌಕೆಯ ಸಿಗ್ನಲ್ ತಡೆಹಿಡಿಯಲಾಗಿದೆ. ಬೃಹತ್ ಆಂಟನಾಗಳು, ರೇಡಾರ್ ಗಳು ಸೆನ್ಸಾರ್ ಗಳು, ಡೇಟಾ ಅಬ್ಸರ್ವಿಂಗ್ ವ್ಯವಸ್ಥೆಗಳು ಮತ್ತು ಕಣ್ಗಾವಲು ಸಿಗ್ನಲ್ ಗಳನ್ನು ಕಂಡು ಹಿಡಿಯಲು ನೆರವಾಗುತ್ತಿವೆ.
ಪ್ರಸ್ತುತ ಲಂಕಾದ ಹಂಬನ್ತೋಟ ಬಂದರಿನಲ್ಲಿ ಲಂಗರು ಹಾಕಿದ್ದ ಚೀನಾದ ಬೇಹುಗಾರಿಕೆ ನೌಕೆ ಸೋಮವಾರ ಲಂಕಾ ಜಲ ಪ್ರದೇಶದಿಂದ ನಿರ್ಗಮಿಸಿದೆ ಎಂದು ವರದಿಗಳು ತಿಳಿಸಿವೆ. ಅದು ಒಟ್ಟು ಆರು ದಿನಗಳ ಕಾಲ ಅಲ್ಲಿ ಲಂಗರು ಹಾಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.