ಚೆನ್ನೈ: ಭಾರತದಿಂದ ಕಳುವಾಗಿ ವಿದೇಶಕ್ಕೆ ಹೋಗಿರುವ ಅತ್ಯಮೂಲ್ಯ ಪ್ರತಿಮೆ, ಕಲಾಕೃತಿಗಳು ಇದೀಗ ಭಾರತಕ್ಕೆ ಮರಳಿ ಬರುತ್ತಿವೆ. ತಮಿಳುನಾಡಿನ ತಂಜಾವೂರು ಜಿಲ್ಲೆಯ ತಂಡನ್ತೋಟ್ಟಂ ನಾದನಪುರೇಶ್ವರ್ ಶಿವನ್ ದೇವಸ್ಥಾನದಿಂದ ನಾಪತ್ತೆಯಾಗಿದ್ದ 13 ನೇ ಶತಮಾನದ ಚೋಳರ ಕಾಲದ ಶೈವ ಕವಿ ಸಂಬಂದಾರ್ ಸಂತರ ನೃತ್ಯ ಮಾಡುತ್ತಿರುವ ಶೈಲಿಯ ಕಂಚಿನ ವಿಗ್ರಹವು ಅಮೆರಿಕದ ಕ್ರಿಸ್ಟೀಸ್ ಹರಾಜು ಕಚೇರಿಯಲ್ಲಿದೆ ಎಂದು ತಮಿಳುನಾಡು ಅಧ್ಯಯನದ ವಿಗ್ರಹ ಪತ್ತೆ ವಿಭಾಗವು ಹೇಳಿದೆ.
ಸುಂದರವಾಗಿ ಕೆತ್ತಿದ ಸಂಬಂದಾರ್ಗ್ರಹವು ಕಮಲದ ಮೇಲೆ ಎಡಗಾಲು ಮೇಲಕ್ಕೆತ್ತಿ ಎಡಗೈಯನ್ನು ಚಾಚಿ, ಗಂಟೆಯೊಂದಿಗೆ ಸೊಂಟದ ಪಟ್ಟಿಯನ್ನು ಧರಿಸಿ ನೃತ್ಯ ಮಾಡುತ್ತಿರುವಂತೆ ಕಾಣುತ್ತದೆ. ತೋಳುಗಳು, ಎದೆ, ಕುತ್ತಿಗೆ ಮತ್ತು ಕಿವಿಗಳನ್ನು ಸುಂದರವಾದ ಆಭರಣಗಳಿಂದ ಅಲಂಕರಿಸಲಾಗಿದೆ. ಬಾದಾಮಿ ಆಕಾರದ ಕಣ್ಣುಗಳು, ಎತ್ತರದ ಶಂಕುವಿನಾಕಾರದ ಶಿರಸ್ತ್ರಾಣವು ವಿಗ್ರಹದ ತಲೆಯನ್ನು ಅಲಂಕರಿಸಿದೆ.
ಇತ್ತೀಚೆಗಷ್ಟೇ ಅದೇ ತಂಡತೋಟ್ಟಂ ದೇವಸ್ಥಾನದ ಪಾರ್ವತಿ ದೇವಿಯ ವಿಗ್ರಹವನ್ನು ಪತ್ತೆಮಾಡಿದ ನಂತರ, ಇದು ಅಮೆರಿಕದಲ್ಲಿ ಪತ್ತೆಯಾದ ಎರಡನೇ ವಿಗ್ರಹವಾಗಿದೆ.
ವಿಗ್ರಹದ ಮಾಲೀಕತ್ವದ ಸೂಕ್ತ ದಾಖಲೆಗಳನ್ನು ಸಲ್ಲಿಸಿ ವಿಗ್ರಹವನ್ನು ಮರಳಿ ತರುವ ಕಾರ್ಯವನ್ನು ಐಡಲ್ ವಿಂಗ್ ಆರಂಭಿಸಿದೆ. ವಿಗ್ರಹ ಭಾರತಕ್ಕೆ ಮರಳಿ ಬಂದಲ್ಲಿ ಅದನ್ನು ನಾದನಪುರೇಶ್ವರ್ ಶಿವನ್ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಐಡಲ್ ವಿಂಗ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.