News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

75 ನೇ ಸ್ವಾತಂತ್ರ್ಯೋತ್ಸವ: ವೈವಿಧ್ಯಮ ಕಾರ್ಯಕ್ರಮಗಳಿಗಾಗಿ ಕಲಬುರಗಿ ಕೇಂದ್ರ ಬಸ್‌ ನಿಲಾಣ ಆಯ್ಕೆ

ಕಲಬುರ್ಗಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಭಕ್ತಿ ಹೆಚ್ಚಿಸುವ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೆ ನವದೆಹಲಿಯ ಎಸ್ಸೋಸಿಯೇಷನ್ ಆಫ್ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಅಂಡರ್ ಟೇಕಿಂಗ್ ಸಂಸ್ಥೆಯು ದೇಶದ 75 ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಸಹ ಆಯ್ಕೆಗೊಂಡಿದೆ.

ಒಂದು ವಾರಗಳ ಕಾಲ ಬಸ್ ನಿಲ್ದಾಣದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪಿಐಬಿ ಸಂಸ್ಥೆಯು ಸಿದ್ಧತೆ ನಡೆಸಿದೆ. ಕೆಕೆಆರ್‌ಟಿಸಿ ಅಗತ್ಯ ಸಹಕಾರ ನೀಡಲಿದೆ. ಆಗಸ್ಟ್ 10 ರಂದು ಇದಕ್ಕೆ ಅಧಿಕೃತವಾಗಿ ಗಣ್ಯ ವ್ಯಕ್ತಿಗಳಿಂದ ಚಾಲನೆ ನೀಡಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ರಾಚಪ್ಪ ಅವರು ತಿಳಿಸಿದ್ದಾರೆ.

ಅಮೃತ ಮಹೋತ್ಸವದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಲು ಸಂಸ್ಥೆಯು ಕಲಬುರಗಿ ವಿಭಾಗ ಒಂದು ಮತ್ತು ಎರಡರ ವಿಭಾಗ ನಿರ್ದೇಶಕರಿಗೆ ನಿರ್ದೇಶನ ನೀಡಿದೆ, ವೇಳಾಪಟ್ಟಿಯಂತೆ ಚಟುವಟಿಕೆ ನಡೆಸಲು ತಿಳಿಸಿದೆ.

ಬಸ್ ನಿಲ್ದಾಣದಲ್ಲಿ ಸ್ಥಳೀಯ ಪ್ರಮುಖ ಸ್ವಾತಂತ್ರ ಹೋರಾಟಗಾರರ ಮತ್ತು ರಾಷ್ಟ್ರೀಯ ನಾಯಕರ ಭಾವಚಿತ್ರಗಳ ಪ್ರದರ್ಶನ, ಸ್ವಾತಂತ್ರ್ಯ ಹೋರಾಟಗಾರರ ಡಿಜಿಟಲ್ ಪೋಸ್ಟರ್‌ಗಳು ಮತ್ತು ಬೋರ್ಡ್ ಸ್ಟ್ಯಾಂಡ್ ಗಳನ್ನು ಹಾಕಲಾಗುತ್ತದೆ. ದೊಡ್ಡ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಲಾಗುತ್ತದೆ.

ಇನ್ನೂ ಒಂದು ವಾರಗಳ ಕಾಲ ಸತತವಾಗಿ ಬಸ್ ನಿಲ್ದಾಣದಲ್ಲಿ ದೇಶಪ್ರೇಮದ ಗೀತೆಗಳು ಮೊಳಗಲಿವೆ. ದೇಶಭಕ್ತಿಯ ಸ್ಲೋಗನ್‌ಗಳನ್ನು ಬರೆಯುವ, ರಂಗೋಲಿ ಬಿಡಿಸುವ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top