News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

75ನೇ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾದ ಲಾಲ್‌ಭಾಗ್:‌ ವಿವಿಧ ಬಗೆ ಹೂವುಗಳ ಆಗಮನ

ನವದೆಹಲಿ: ಬೆಂಗಳೂರಿನ ಲಾಲ್‌ಬಾಗ್ ಗ್ಲಾಸ್ ಹೌಸ್‌ನಲ್ಲಿ ನಡೆಯಲಿರುವ 75ನೇ ಫಲಪುಷ್ಪ ಪ್ರದರ್ಶನದ ಪೂರ್ವಭಾವಿಯಾಗಿ ವಿವಿಧ ಬಗೆಯ ಹೂವುಗಳು ಬುಧವಾರ ಆಗಮಿಸಿವೆ. ಪುನೀತ್‌ ರಾಜ್‌ಕುಮಾರ್‌  ಗ

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವು ಶೂನ್ಯ-ತ್ಯಾಜ್ಯ, ಶೂನ್ಯ-ಪ್ಲಾಸ್ಟಿಕ್ ಮತ್ತು ಶೂನ್ಯ-ಕಸದ ಥೀಮ್‌ನೊಂದಿಗೆ ನಡೆಯುತ್ತಿದೆ.

ಆಗಸ್ಟ್ 5 ಮತ್ತು 15 ರ ನಡುವೆ ಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಘನತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್ (SWMRT) ಜಂಟಿಯಾಗಿ ಸುಸ್ಥಿರ ತ್ಯಾಜ್ಯ ನಿರ್ವಹಣೆಗಾಗಿ ಪುಷ್ಪ ಪ್ರದರ್ಶನವನ್ನು ಸ್ವಚ್ಛವಾಗಿಡುವ ಕಾರ್ಯಕ್ಕೆ ಸಜ್ಜಾಗಿದೆ.

ಪ್ರದರ್ಶನದಲ್ಲಿ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಮತ್ತೊಂದು ತ್ಯಾಜ್ಯ ನಿರ್ವಹಣಾ ಎನ್‌ಜಿಒ ಸಹಾಸ್ ಇದರ ಸೌಲಭ್ಯದಲ್ಲಿ ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ, ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡಲಾಗುತ್ತದೆ.

“ಮೂರು ವರ್ಷಗಳ ಹಿಂದೆ ಕೊನೆಯ ಪ್ರದರ್ಶನದಲ್ಲಿ , ಗೇಟ್‌ಗಳ ಹೊರಗೆ ಮಾರಾಟವಾದ ಮಿನರಲ್ ವಾಟರ್ ಬಾಟಲಿಗಳನ್ನು ಹೊರತುಪಡಿಸಿ ಬಹುತೇಕ ಶೂನ್ಯ ತ್ಯಾಜ್ಯ ಹೊಂದಿದ್ದೆವು. ದಂಡ ವಿಧಿಸಲು ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲು ಈ ವರ್ಷ ಬಿಬಿಎಂಪಿ ಮಾರ್ಷಲ್ ಗಳನ್ನು ನೇಮಿಸುತ್ತಿದ್ದೇವೆ’ ಎಂದು SWMRT ಸಂಸ್ಥಾಪಕರಾದ ಎನ್.ಎಸ್ . ರಮಾಕಾಂತ್ ಹೇಳಿದ್ದಾರೆ.

ಪ್ರದರ್ಶನದ 10 ದಿನಗಳಲ್ಲಿ ಐದು ಮಾರ್ಷಲ್‌ಗಳು ಪ್ಲಾಸ್ಟಿಕ್ ಬಳಕೆ ಮತ್ತು ಕಸವನ್ನು ವೀಕ್ಷಿಸಲು ಸುತ್ತು ಹಾಕಲಿದ್ದಾರೆ. ಪ್ರದರ್ಶನಕ್ಕೆ ನಿಯೋಜನೆಗೊಂಡಿರುವ 300 ಪೊಲೀಸರು ಕಸ ಹಾಕುವುದನ್ನು ಪರಿಶೀಲಿಸುವ ಮೂಲಕ ಉದ್ಯಾನವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತಾರೆ ಎಂದು ಅವರು ಹೇಳಿದರು.

“ಪ್ರದರ್ಶನದಲ್ಲಿ ಸ್ಟಾಲ್‌ಗಳನ್ನು ಹಾಕುವ ಎಲ್ಲಾ ಮಾರಾಟಗಾರರು ಯಾವುದೇ ರೀತಿಯ ಪ್ಲಾಸ್ಟಿಕ್‌ಗಳನ್ನು ಬಳಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಏಕ ಬಳಕೆ ಮತ್ತು ಮರುಬಳಕೆ ಎರಡೂ ಪ್ಲಾಸ್ಟಿಕ್‌ ಬಳಕೆ ಇಲ್ಲ. ಇದು ನಮ್ಮ ಆಂದೋಲನಕ್ಕೆ ಇನ್ನಷ್ಟು ಸಹಕಾರಿಯಾಗುತ್ತದೆ” ಎಂದು  ರಮಾಕಾಂತ್ ಹೇಳಿದ್ದಾರೆ.

ಮೈಸೂರು ತೋಟಗಾರಿಕಾ ಸಂಸ್ಥೆ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಬುಧವಾರ ಸುದ್ದಿಗೋಷ್ಠಿ ನಡೆಸಲಾಗಿ, ಒಟ್ಟು ರೂ2.3 ಕೋಟಿ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಗಾಜಿನ ಮನೆಯೊಳಗೆ ಒಟ್ಟು 65 ಕ್ಕೂ ಹೆಚ್ಚು ಪ್ರಭೇದಗಳ 3.5 ಲಕ್ಷ ಹೂವಿನ ಕುಂಡಗಳನ್ನು ಪ್ರದರ್ಶಿಸಲಾಗುತ್ತದೆ. ಊಟಿಯಿಂದ 20 ಬಗೆಯ ಸಮಶೀತೋಷ್ಣ ಹೂವುಗಳ ಜತೆಗೆ 10 ದೇಶಗಳಿಂದ ಟುಲಿಪ್ಸ್, ಹೈಡ್ರೇಂಜ, ಹೈಪರಿಕಂ ಬೆರ್ರಿ ಸೇರಿದಂತೆ 27 ಬಗೆಯ ಹೂವುಗಳು ಆಗಮಿಸಿವೆ. ಈ ಬಾರಿಯ ಫಲಪುಷ್ಪ ಪ್ರದರ್ಶನವು ನಟರಾದ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಗೌರವಾರ್ಥವಾಗಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top