News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಸ್‌ಬಿಐನಲ್ಲಿ ಕಸ ಗುಡಿಸುತ್ತಿದ್ದಾಕೆ ಇಂದು ಅದೇ ಬ್ಯಾಂಕಿನ ಜನರಲ್‌ ಮ್ಯಾನೇಜರ್

ಪುಣೆ: ಸಾಧಿಸುವ ಛಲ ಇದ್ದರೆ ಯಾವ ಅಡೆತಡೆಗಳು ದೊಡ್ಡದು ಎನಿಸುವುದಿಲ್ಲ. ಇಲ್ಲೊಬ್ಬರು ಮಹಿಳೆ ಒಂದು ಕಾಲದಲ್ಲಿ ತಾವು ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಇಂದು ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರತೀಕ್ಷಾ ತೊಂಡ್ವಾಲ್ಕರ್ ಪುಣೆಯಲ್ಲಿ ಜನಿಸಿದ ಬಡ ಕುಟುಂಬದಲ್ಲಿ ಜನಿಸಿದವರು. ಇದೇ ಕಾರಣಕ್ಕೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ 16ನೇ ವಯಸ್ಸಿನಲ್ಲೇ ಸದಾಶಿವ ಕಾಡು ಎಂಬುವವರನ್ನು ವಿವಾಹವಾಗುತ್ತಾರೆ. ಸದಾಶಿವ ಅವರು ಎಸ್‌ಬಿಐನ ಮುಂಬೈ ಶಾಖೆಯಲ್ಲಿ ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಅಪಘಾತದಿಂದ ನಿಧನರಾಗುತ್ತಾರೆ.  20 ನೇ ವಯಸ್ಸಿನಲ್ಲಿಯೇ ಪ್ರತೀಕ್ಷಾ ವಿಧವೆಯಾದರು. ಒಂದು ಪುಟ್ಟ ಮಗುವೂ ಆವರಿಗಿತ್ತು.

ಜೀವನ ನಿರ್ವಹಣೆಗಾಗಿ ಅವರು ಕೆಲಸ ಮಾಡಬೇಕಾಯಿತು. ಹಲವು ಕಡೆ ದುಡಿದ ಬಳಿಕ ಕೊನೆಗೆ ತನ್ನ ಪತಿ ಕೆಲಸ ಮಾಡುತ್ತಿದ್ದ ಎಸ್​ಬಿಐ ಬ್ಯಾಂಕ್​ನಲ್ಲಿ ಅನುಕಂಪದ ಆಧಾರದ ಮೇಲೆ ಆಕೆಗೆ ಕಸ ಗುಡಿಸುವ ಕೆಲಸ ಪಡೆದರು.

ಬೆಳಿಗ್ಗೆ ಎರಡು ಗಂಟೆಗಳ ಕಾಲ ಬ್ಯಾಂಕ್​ ಕ್ಲೀನ್​ ಮಾಡುತ್ತಿದ್ದ ಪ್ರತೀಕ್ಷಾಗೆ ತಿಂಗಳಿಗೆ ಕೇವಲ 65 ರೂಪಾಯಿ ದೊರೆಯುತ್ತಿತ್ತು. ಹೀಗಾಗಿ ಬ್ಯಾಂಕ್​​ನಲ್ಲಿ ಕಸ ಗುಡಿಸುವ ಕೆಲಸ ಮುಗಿದ ಬಳಿಕ ಹೊರಗಡೆ ಬೇರೆ ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು.

ಪ್ರತಿಕ್ಷಾ ಅವರ ಪ್ರಾಮಾಣಿಕ ಸೇವೆಯನ್ನು ಕಂಡ ಬ್ಯಾಂಕ್ ಸಿಬ್ಬಂದಿ 10ನೇ ತರಗತಿ ಪರೀಕ್ಷೆ ಬರೆಯಲು ಅವರಿಗೆ ಬೆಂಬಲ ನೀಡಿದರು. ಹತ್ತನೇ ತರಗತಿಯಲ್ಲಿ ಶೇಕಡಾ 60 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪಾಸ್​ ಆದ ಪ್ರತಿಕ್ಷಾ ಅವರಿಗೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲ ವರ್ಷಗಳ ನಂತರ ಅಟೆಂಡರ್ ಆಗಿ ಬಡ್ತಿ ಸಿಕ್ಕಿತು. ಪ್ರತಿಕ್ಷಾ ಅವರಿಗೆ ಕಲಿಯುವ ಛಲ ಕಡಿಮೆ ಆಗಲಿಲ್ಲ. ಕಷ್ಟಪಟ್ಟು 12 ನೇ ತರಗತಿ ಕೂಡ ಪಾಸಾದರು. ಬಳಿಕ ಅದೇ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಬಡ್ತಿ ಪಡೆದರು. 2004 ರಲ್ಲಿ ‘ಎಸ್‌ಬಿಐ ಟ್ರೈನಿ ಆಫೀಸರ್’ ಹುದ್ದೆ ಒಲಿದು ಬಂದಿತು. ಹೀಗೆ ಒಂದೊಂದು ಹೆಜ್ಜೆ ಮುಂದೆ ಸಾಗಿದ ಪ್ರತಿಕ್ಷಾ ಅವರು ಕಳೆದ ಜೂನ್‌ನಲ್ಲಿ ಎಸ್‌ಬಿಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು.

ಇಂದು ಅವರ ಯಶೋಗಾಥೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರತೀಕ್ಷಾ ಅವರೇ ಅತ್ಯುತ್ತಮ ಉದಾಹರಣೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top