News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಾಟರ್‌ ಪ್ರೂಫ್‌ ರಾಖಿ ಲಕೋಟೆಗಳನ್ನು ಹೊರತಂದಿದೆ ಅಂಚೆ ಇಲಾಖೆ

ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಈ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅಣ್ಣನಿಂದ ದೂರ ಇರುವ ತಂಗಿಯರು ಅಂಚೆ ಮೂಲಕವೇ ರಕ್ಷೆಯನ್ನು ಕಳುಹಿಸಿ ತಮ್ಮ ಮಮತೆಯನ್ನು ತೋರಿಸುತ್ತಾರೆ. ಅಂತವರಿಗೆಂದೇ ಅಂಚೆ ಇಲಾಖೆ ಕೂಡ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತಿದೆ.

ಅಂಚೆ ಇಲಾಖೆಯು ರಕ್ಷಾ ಬಂಧನಕ್ಕಾಗಿ ವಿಶೇಷವಾದ ವಾಟರ್‌ ಪ್ರೂಫ್ ಲಕೋಟೆಗಳನ್ನು ಹೊರತಂದಿದೆ.

ಈ ಬಗ್ಗೆ ಅಂಚೆ ಇಲಾಖೆ ಟ್ವಿಟ್‌ ಮಾಡಿದ್ದು, “ರಕ್ಷಾ ಬಂಧನದ ಸಂದರ್ಭದಲ್ಲಿ ವಿಶೇಷ ರಾಖಿ ಲಕೋಟೆಗಳೊಂದಿಗೆ ಹೊರಬಂದಿದೆ. ಲಕೋಟೆಗಳು ವಿಶಿಷ್ಟ ವಿನ್ಯಾಸವನ್ನು ಹೊಂದಿವೆ ಮತ್ತು ಸಂಪೂರ್ಣವಾಗಿ ಜಲನಿರೋಧಕವಾಗಿವೆ. ಈ ರಾಖಿ ಲಕೋಟೆಗಳ ಬೆಲೆಯನ್ನು ಪ್ರತಿ ಲಕೋಟೆಗೆ 15 ರೂಪಾಯಿಗಳ ನಿಗದಿಪಡಿಸಲಾಗಿದೆ” ಎಂದಿದೆ.

ಆಗಸ್ಟ್ 11 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದೆ.

ದೆಹಲಿ ಪೋಸ್ಟಲ್ ಸರ್ಕಲ್ ದೆಹಲಿ ನಗರದ ಅಂಚೆ ಕಛೇರಿಗಳ ಮೂಲಕ ಅತ್ಯುತ್ತಮ ದಕ್ಷತೆ, ವಾಟರ್‌ ಪ್ರೂಫ್, ಕಡಿಮೆ ತೂಕ ಮತ್ತು ಸೊಗಸಾದ ಮುದ್ರಣದೊಂದಿಗೆ ಉತ್ತಮ ಗುಣಮಟ್ಟದ ರಾಖಿ ಲಕೋಟೆಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆಯನ್ನು ಮಾಡಿದೆ. ದೆಹಲಿಯ ಅಂಚೆ ಕಚೇರಿಗಳಲ್ಲಿ ರಾಖಿ ಲಕೋಟೆಗಳ ಮಾರಾಟವನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top