ನವದೆಹಲಿ: ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯುವ ಒಂದು ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದು, 5 ವರ್ಷಗಳ ಅತ್ಯುತ್ತಮ ಸೇವೆಗೆ ಪ್ರ ಧನ್ಯವಾದ ಹೇಳಿದ್ದಾರೆ.
ಪತ್ರದ ಮೂಲಕ ಮೋದಿ ಕೋವಿಂದ್ ಜೊತೆಗಿನ ಹಲವು ನೆನಪುಗಳನ್ನು ಮೋದಿ ಬಿಚ್ಚಿಟ್ಟಿದ್ದಾರೆ.
ಮಾಜಿ ರಾಷ್ಟ್ರಪತಿ ಕೋವಿಂದ್ ಅವರು ಟ್ವೀಟ್ ಮೂಲಕ ಪತ್ರವನ್ನು ಹಂಚಿಕೊಂಡಿದ್ದು, ಈ ಪತ್ರ ನನ್ನ ಹೃದಯ ತಟ್ಟಿದೆ ಎಂದಿದ್ದಾರೆ.
“ತಮ್ಮ ಅವಧಿಯಲ್ಲಿ ತತ್ವಗಳು, ನಿಷ್ಠೆ, ಕಾರ್ಯಕ್ಷಮತೆ ಮತ್ತು ಸೂಕ್ಷ್ಮತೆ ಮತ್ತು ಸೇವೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೀರಿ” ಎಂದು ಮೋದಿ ಪತ್ರದಲ್ಲಿ ಹೊಗಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಕೋವಿಂದ್ ಹುಟ್ಟಿ ಬೆಳೆದ ಪರೌಂಖ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದನ್ನು ಮೋದಿ ನೆನೆಪಿಸಿಕೊಂಡಿದ್ದಾರೆ. 2019ರಲ್ಲಿ ಕೋವಿಂದ್ ಗುಜರಾತ್ ಭೇಟಿ ಸಂದರ್ಭದಲ್ಲಿ ತಮ್ಮ ತಾಯಿ ಹೀರಾಬೆನ್ ನಿವಾಸಕ್ಕೆ ಭೇಟಿ ನೀಡಿ ನಡೆಸಿದ ಮಾತುಕತೆಯ ಬಗ್ಗೆ ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದ ಬಗ್ಗೆ ಕೋವಿಂದ್ ಅವರು ಟ್ವಿಟ್ ಮಾಡಿ, “ಪ್ರಧಾನಿ ನರೇಂದ್ರ ಮೋದಿಯವರ ಈ ಪತ್ರ ನನ್ನನ್ನು ಆಳವಾಗಿ ಮುಟ್ಟಿದೆ. ಸಹ ನಾಗರಿಕರು ನನ್ನ ಮೇಲೆ ತೋರಿದ ಪ್ರೀತಿ ಮತ್ತು ಗೌರವದ ಪ್ರತಿಬಿಂಬವಾಗಿ ನಾನು ಅವರ ದಯೆ ಮತ್ತು ಹೃತ್ಪೂರ್ವಕ ಮಾತುಗಳನ್ನು ತೆಗೆದುಕೊಳ್ಳುತ್ತೇನೆ. ನಿಮ್ಮೆಲ್ಲರಿಗೂ ನಾನು ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ” ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ.
This letter from Prime Minister @narendramodi has deeply touched me. I take his kind and heartfelt words as a reflection of love and respect fellow citizens have showered on me. I am sincerely grateful to you all. pic.twitter.com/8GBBMnwvYf
— Ram Nath Kovind (@ramnathkovind) July 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.