News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದ್ರೌಪದಿ ಮುರ್ಮು ಆಯ್ಕೆ ಸಮುದಾಯಗಳನ್ನು ವಿಭಜಿಸುವವರಿಗೆ ತಕ್ಕ ಉತ್ತರ: ಅಮಿತ್‌ ಶಾ

ನವದೆಹಲಿ: ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಐತಿಹಾಸಿಕ ಘಟನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಬಣ್ಣಿಸಿದ್ದಾರೆ ಮತ್ತು ಅವರ ಗೆಲುವು ಕೇವಲ ಬುಡಕಟ್ಟು ಜನಾಂಗದವರ ಸಬಲೀಕರಣದ ಬಗ್ಗೆ ಮಾತನಾಡುವ ಆದರೆ ಸಮುದಾಯಗಳನ್ನು ವಿಭಜಿಸುವವರಿಗೆ ತಕ್ಕ ಉತ್ತರವಾಗಿದೆ ಎಂದು ಹೇಳಿದರು.

ಆದಿವಾಸಿಗಳ ಸಬಲೀಕರಣವು ಅವರ ಬಗ್ಗೆ ಮಾತನಾಡುವುದರಿಂದ ಅಲ್ಲ, ಅವರ ಸಬಲೀಕರಣಕ್ಕಾಗಿ ಕೆಲಸ ಮಾಡುವ  ರೀತಿಯ ಮೂಲಕ ಸಾಧಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬುಡಕಟ್ಟು ಸಂತಾಲ್ ಸಮುದಾಯಕ್ಕೆ ಸೇರಿದ ಮತ್ತು ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದ ವ್ಯಕ್ತಿಯೊಬ್ಬರು ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಪ್ರಜಾಪ್ರಭುತ್ವದ ದೊಡ್ಡ ವಿಜಯ ಎಂದು ಶಾ ಹೇಳಿದ್ದಾರೆ

“ಸ್ಪರ್ಧಿಸುವ ಇಬ್ಬರು ರಾಷ್ಟ್ರಪತಿ ಅಭ್ಯರ್ಥಿಗಳಲ್ಲಿ ಒಬ್ಬರು ಗೆಲ್ಲುವುದು ಸಹಜ, ಆದರೆ ದ್ರೌಪದಿ ಮುರ್ಮು ರಾಷ್ಟ್ರಪತಿ ಆಗುತ್ತಿರುವುದು ದೇಶದ ಸ್ವಾತಂತ್ರ್ಯದ 75 ವರ್ಷಗಳ ಐತಿಹಾಸಿಕ ಘಟನೆ” ಎಂದಿದ್ದಾರೆ.

ಬುಡಕಟ್ಟು ಸಬಲೀಕರಣದ ಬಗ್ಗೆ ಮಾತನಾಡುವ ಮತ್ತು ಸಮುದಾಯಗಳನ್ನು ಒಡೆದು ಅದರ ಹೆಸರಿನಲ್ಲಿ ರಾಜಕೀಯ ಮಾಡುವ ಎಲ್ಲರಿಗೂ ಮುರ್ಮು ಅವರ ಗೆಲುವು ಉತ್ತರವಾಗಿದೆ ಎಂದಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮತ್ತು ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಕುರಿತು ಕೂಡ ಶಾ ಮಾತನಾಡಿದರು.

ಕಲಾಂ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವ ಭೂಪಟದಲ್ಲಿ ಕೊಂಡೊಯ್ಯುವ ಮೂಲಕ ಭಾರತವನ್ನು ಸುಭದ್ರಗೊಳಿಸಲು ಕೊಡುಗೆ ನೀಡಿದರೆ, ಕೋವಿಡ್ ಕಡು ಬಡ ದಲಿತ ಕುಟುಂಬದಿಂದ ಬಂದು‌ ಹಲವು ಹೋರಾಟದ ನಂತರ ಉನ್ನತ ಹುದ್ದೆಗೆ ಏರಿದರು” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top