News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀಲಂಕಾ ಪ್ರತಿಪಕ್ಷ ನಾಯಕನಿಂದ ಭಾರತ ಮತ್ತು ಮೋದಿಗೆ ಮಹತ್ವದ ಮನವಿ

ಕೊಲಂಬೊ: ಶ್ರೀಲಂಕಾದ ಹೊಸ ಅಧ್ಯಕ್ಷರ ಆಯ್ಕೆಗೆ ಇಂದು ಅಲ್ಲಿ ಚುನಾವಣೆ ನಡೆಯುತ್ತಿದೆ. ಇದಕ್ಕೂ ಮುನ್ನ ಅಲ್ಲಿನ ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಉನ್ನತ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೆ ಎಂಬುದನ್ನು ಲೆಕ್ಕಿಸದೆ ದ್ವೀಪ ರಾಷ್ಟ್ರವನ್ನು ಬೆಂಬಲಿಸುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.

ಶ್ರೀಲಂಕಾದ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯ ನಾಯಕ  ಪ್ರೇಮದಾಸ ಅವರು ನಿನ್ನೆ ಸಂಜೆ ಟ್ವೀಟ್ ಮಾಡಿದ್ದು, “ನಾಳೆ ಯಾರೇ ಶ್ರೀಲಂಕಾದ ಅಧ್ಯಕ್ಷರಾಗಲಿ ಲಂಕಾ ಮಾತೆಗೆ  ಮತ್ತು ಇಲ್ಲಿನ ಜನರಿಗ  ಈ ವಿಪತ್ತಿನಿಂದ ಹೊರಬರಲು ಸಹಾಯ ಮಾಡಿ ಎಂಬುದು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ, ಭಾರತ, ಅಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಭಾರತದ ಜನರಿಗೆ ನನ್ನ ವಿನಮ್ರ ಮತ್ತು ಶ್ರದ್ಧಾಪೂರ್ವಕ ವಿನಂತಿಯಾಗಿದೆ” ಎಂದಿದ್ದಾರೆ.

ಶ್ರೀಲಂಕಾವು ಬೃಹತ್ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿದೆ, ಅದರ 22 ಮಿಲಿಯನ್ ಜನಸಂಖ್ಯೆಯು ಆಹಾರ ಮತ್ತು ಇಂಧನದ ತೀವ್ರ ಕೊರತೆಯನ್ನು ಎದುರಿಸುತ್ತಿದೆ.

ಬಿಕ್ಕಟ್ಟಿನ ಕುರಿತು ತಿಂಗಳುಗಳಿಂದ ನಡೆಯುತ್ತಿರುವ ಬೀದಿ ಪ್ರತಿಭಟನೆಗಳು ಕಳೆದ ವಾರ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದವು. ರಾಜಪಕ್ಸೆ ಮತ್ತು ಅವರ ಕುಟುಂಬ ಸದಸ್ಯರು, ಅವರ ಸರ್ಕಾರದಲ್ಲಿದ್ದ ಅನೇಕರು, ದೇಶದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿದ್ದಾರೆ ಎಂಬುದು ಅಲ್ಲಿನ ಜನರ ಆರೋಪ.

ಇದೀಗ ಅಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ರನಿಲ್‌ ವಿಕ್ರಮಸಿಂಘೆ, ಪ್ರೇಮದಾಸ ರೇಸ್‌ನಲ್ಲಿ ಇದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top