ನವದೆಹಲಿ: ಓವರ್ಲೋಡ್ಗಾಗಿ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಾರಿಗೆದಾರರಿಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
ಓವರ್ ಲೋಡಿಂಗ್ಗಾಗಿ ಸಾಗಾಣೆದಾರರ ಮೇಲೆ ಭಾರೀ ದಂಡವನ್ನು ವಿಧಿಸಬೇಕು, ಇಲ್ಲದಿದ್ದರೆ ಅವರು ಭಾರತೀಯ ರಸ್ತೆಗಳಲ್ಲಿನ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ವೇಗದ ಸರಕು ಸಾಗಣೆಗಾಗಿ ಎಲ್ಲಾ ಜಿಲ್ಲೆಗಳಿಗೆ ಕನಿಷ್ಠ ನಾಲ್ಕು ಪಥಗಳ ಹೆದ್ದಾರಿ ಸಂಪರ್ಕವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ ಎಂದ ಅವರು, ಅನುಮತಿಸುವ ಮಿತಿಗಿಂತ ಹೆಚ್ಚಿನ ತೂಕವನ್ನು ಲೋಡ್ ಮಾಡಿದರೆ ಅದರ ಜವಾಬ್ದಾರಿಯನ್ನು ಸಾಗಾಣೆದಾರರು ಹೊರಬೇಕಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಆರ್ಟಿಒಗಳಿಂದ ಅನುಮತಿ ಪಡೆಯುವಲ್ಲಿ ಸಾರಿಗೆದಾರರು ಇನ್ನೂ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನೂ ಸಚಿವರು ಒಪ್ಪಿಕೊಂಡಿದ್ದಾರೆ.
“ನಾವು ದೇಶಾದ್ಯಂತ ಡಿಜಿಟೈಸ್ಡ್ ವ್ಯವಸ್ಥೆಯನ್ನು ಹೊಂದಬೇಕು” ಎಂದು ಅವರು ಹೇಳಿದ್ದಾರೆ.
ಆಟೋಮೊಬೈಲ್ ವಲಯದಲ್ಲಿ ಎಆರ್ಎಐನಂತೆ ಫ್ಯೂಚರಿಸ್ಟಿಕ್ ಪ್ಲಾನಿಂಗ್ ಬಹಳ ಮುಖ್ಯವಾಗಿರುವುದರಿಂದ ಭವಿಷ್ಯಕ್ಕೆ ಸೂಕ್ತವಾದ ತಂತ್ರಜ್ಞಾನವನ್ನು ಸಂಶೋಧಿಸಬಲ್ಲ ಮತ್ತು ಭಾರತೀಯ ನಿರ್ಮಾಣ ಸಲಕರಣೆಗಳ ಉತ್ಪಾದನಾ ಉದ್ಯಮಕ್ಕೆ ವಿಶೇಷವಾಗಿ ಸಂಸ್ಥೆ ಇರಬೇಕು ಎಂದು ಗಡ್ಕರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.