ನವದೆಹಲಿ: ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಾಳಿ ಮಾತೆಯ ಕುರಿತು ಅವಹೇಳನಕಾರಿಯಾದ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಇಂದು ಬಿಜೆಪಿ ನಾಯಕ ಜಿತೇನ್ ಚಟರ್ಜಿ ಅವರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿ ಮಹುವಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕಾಳಿ ಸಿಗರೇಟು ಸೇವಿಸುತ್ತಿರುವ ಪೋಸ್ಟರ್ಗೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದ ಮಹುವಾ, ಕಾಳಿ ಮಾಂಸ ಭಕ್ಷಕಿ, ಮದ್ಯ ಸೇವನೆ ಮಾಡುವವಳು ಎಂದಿದ್ದರು. ಇದು ಭಾರೀ ವಿವಾದ ಸೃಷ್ಟಿ ಮಾಡಿತ್ತು. ಟಿಎಂಸಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.
ಬಂಗಾಳದ ಬಿಜೆಪಿ ನಾಯಕರು ಮೊಯಿತ್ರಾ ಅವರನ್ನು ಬಂಧಿಸುವಂತೆ ಕೋರಿದ್ದಾರೆ. 10 ದಿನಗಳಲ್ಲಿ ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪಕ್ಷ ಹೇಳಿದೆ.
“ಸನಾತನ ಹಿಂದೂ ಧರ್ಮದ ಪ್ರಕಾರ, ಕಾಳಿ ದೇವಿಯನ್ನು ಎಂದಿಗೂ ಮದ್ಯ ಮತ್ತು ಮಾಂಸವನ್ನು ಸೇವಿಸುವ ದೇವತೆಯಾಗಿ ಪೂಜಿಸಲಾಗುವುದಿಲ್ಲ. ಹಿಂದೂಗಳು ಕಾಳಿ ದೇವಿಯನ್ನು ದುಷ್ಟರ ವಿರುದ್ಧ ಶಕ್ತಿಯ ಸಂಕೇತವಾಗಿ ಪೂಜಿಸುತ್ತಿದ್ದಾರೆ. ಅವರ ಹೇಳಿಕೆಗಳು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿವೆ.ಕಾಳಿ ದೇವಿಯ ವಿರುದ್ಧ ಹೇಳಿಕೆ ನೀಡಿದ ಮಹುವಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ” ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.
FIR registered against TMC MP Mahua Moitra in Bhopal over her alleged controversial statement on Goddess Kali. Case registered under section 295A of IPC for hurting religious sentiments
(file pic) pic.twitter.com/yRydMr1iF2
— ANI (@ANI) July 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.