ಚೆನ್ನೈ: ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷದ ಎ.ರಾಜಾ ಅವರು ‘ಪ್ರತ್ಯೇಕ ತಮಿಳುನಾಡು’ ಬಗ್ಗೆ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಅವರ ಈ ಹೇಳಿಕೆಗೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.
ತಮಿಳುನಾಡಿನ ಮುಖ್ಯಮಂತ್ರಿ ಎಕೆ ಸ್ಟಾಲಿನ ಅವರ ಸಮ್ಮುಖದಲ್ಲಿಯೇ ಅವರು ಈ ಹೇಳಿಕೆಯನ್ನು ನೀಡಿರುವುದು ದುರಾದೃಷ್ಟಕರ.
ಡಿಎಂಕೆ ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜಾ, “ಸ್ವಯತ್ತತೆ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇನೆ. ತಮಿಳುನಾಡಿಗೆ ಸ್ವಾಯತ್ತತೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದಿದ್ದಾರೆ.
“ಪ್ರಜಾಪ್ರಭುತ್ವ ಮತ್ತು ಭಾರತದ ಏಕತೆಗಾಗಿ ಈ ಬೇಡಿಕೆಯನ್ನು ನಾವು ಬದಿಗಿರಿಸುತ್ತಾ ಬಂದಿದ್ದೇವೆ. ಈ ಬೇಡಿಕೆಯನ್ನು ಮುನ್ನಲೆಗೆ ತರುವಂತೆ ಮಾಡಬೇಡಿ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡುತ್ತೇನೆ. ನನಗೆ ರಾಜ್ಯ ಸ್ವಯತ್ತತೆ ನೀಡಿ” ಎಂದಿದ್ದಾರೆ.
“ಭಾರತದಲ್ಲಿ ಇರುವವರೆಗೆ ತಮಿಳಿಗರು ಆರ್ಥಿಕ ಪ್ರಗತಿ ಕಾಣುವುದಿಲ್ಲ, ಉದ್ಯೋಗ ಪಡೆಯುವುದಿಲ್ಲ” ಎಂದಿದ್ದಾರೆ.
ಅವರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತ್ಯೇಕವಾದದ ಮಹತ್ವಾಕಾಂಕ್ಷೆಯನ್ನು ಬಿತ್ತುವ ಪ್ರಯತ್ನ ಇದು ಎಂದು ಆರೋಪಿಸಿದ್ದಾರೆ. “ಕೇಂದ್ರದಲ್ಲಿ ಇರುವ ಪಕ್ಷವನ್ನು ವಿರೋಧಿಸಲು ಈ ಹೇಳಿಕೆ ನೀಡಿರಬಹುದು. ಆದರೆ ಹೀಗೆ ಮಾಡುವುದರಿಂದ ನೀವು ಒಂದು ಭಾರತದ ಪರಿಕಲ್ಪನೆಯನ್ನು ವಿರೋಧಿಸಲು ಆರಂಭಿಸಿದ್ದೀರಿ ಎಂದು ಅರ್ಥ” ಎಂಬ ಬಿಜೆಪಿಯ ಶೆಹಜಾದ್ ಪೂನಾವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.