ನವದೆಹಲಿ: ಮಂಗೋಲಿಯಾದಲ್ಲಿ ಬುದ್ಧ ಪೂರ್ಣಿಮೆಯ ಆಚರಣೆಗಳ ಭಾಗವಾಗಿ ಗಂಡನ್ ಮಠದ ಬಟ್ಸಾಗಾನ್ ದೇವಾಲಯದಲ್ಲಿ 12 ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿದ್ದ ಭಗವಾನ್ ಬುದ್ಧನ ನಾಲ್ಕು ಪವಿತ್ರ ಅವಶೇಷಗಳು ಭಾರತಕ್ಕೆ ಹಿಂದಿರುಗಿವೆ.
ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಅವರು ಗಾಜಿಯಾಬಾದ್ನಲ್ಲಿ ಪುಣ್ಯ ಅವಶೇಷಗಳನ್ನು ಸ್ವೀಕರಿಸಿದರು. ಮಂಗೋಲಿಯಾ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರದರ್ಶನದ ಅವಧಿಯನ್ನು ಕೆಲವು ದಿನಗಳವರೆಗೆ ವಿಸ್ತರಿಸಲಾಗಿತ್ತು.
ಮಂಗೋಲಿಯಾ ಅಧ್ಯಕ್ಷರು, ಸಂಸತ್ತಿನ ಸ್ಪೀಕರ್, ಮಂಗೋಲಿಯಾದ ವಿದೇಶಾಂಗ ಸಚಿವರು, ಸಂಸ್ಕೃತಿ ಸಚಿವರು, ಪ್ರವಾಸೋದ್ಯಮ ಸಚಿವರು, ಇಂಧನ ಸಚಿವರು ಸೇರಿದಂತೆ 20 ಕ್ಕೂ ಹೆಚ್ಚು ಸಂಸದರು ಮತ್ತು ಮಂಗೋಲಿಯಾದ 100 ಕ್ಕೂ ಹೆಚ್ಚು ಮಠಗಳು ಪೂಜ್ಯ ಅವಶೇಷಕ್ಕೆ ಗೌರವ ಸಲ್ಲಿಸಿವೆ.
ಪ್ರದರ್ಶನದ ದಿನದಲ್ಲಿ ಸುಮಾರು 18-20 ಸಾವಿರ ಭಕ್ತರು ಇದಕ್ಕೆ ಪೂಜೆಯನ್ನು ಸಲ್ಲಿಸಿದ್ದಾರೆ. ದಿನಕ್ಕೆ ಸರಾಸರಿ 5-6 ಸಾವಿರ ಭಕ್ತರು ಮಠಕ್ಕೆ ಭೇಟಿ ನೀಡಿದ್ದಾರೆ, ಸರಾಸರಿ 9-10 ಸಾವಿರ ಭಕ್ತರು ಹರಕೆ ತೀರಿಸಿದ್ದಾರೆ.
ಕಪಿಲವಸ್ತ ಅವಶೇಷಗಳು ಎಂದು ಕರೆಯಲ್ಪಡುವ ಪವಿತ್ರ ಬುದ್ಧನ ಅವಶೇಷಗಳು 1898 ರಲ್ಲಿ ಮೊದಲು ಪತ್ತೆಯಾದ ಬಿಹಾರದ ಸ್ಥಳಕ್ಕೆ ಸೇರಿದವು, ಇದನ್ನ ಪ್ರಾಚೀನ ಕಪಿಲವಸ್ತು ಎಂದು ನಂಬಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.