ನವದೆಹಲಿ: ಭಾರತವು ದ್ವೀಪ ರಾಷ್ಟ್ರಕ್ಕೆ ಒದಗಿಸುತ್ತಿರುವ ಮಾನವೀಯ ನೆರವಿನ ಭಾಗವಾಗಿ 3 ಶತಕೋಟಿ ಶ್ರೀಲಂಕಾ ರೂಪಾಯಿ ಮೌಲ್ಯದ ಭಾರತೀಯ ಸರಕುಗಳು ನಿನ್ನೆ ಕೊಲಂಬೊಗೆ ತಲುಪಿವೆ.
ಈ ಮಾನವೀಯ ನೆರವು ಭಾರತದ ಜನರು ದಾನ ಮಾಡಿದ 14,700 MT ಅಕ್ಕಿ, 250 MT ಹಾಲಿನ ಪುಡಿ ಮತ್ತು 38 MT ಔಷಧಗಳನ್ನು ಒಳಗೊಂಡಿದೆ. ತಮಿಳುನಾಡು ಸರ್ಕಾರದಿಂದ 40,000 MT ಅಕ್ಕಿ, 500 MT ಹಾಲಿನ ಪುಡಿ ಮತ್ತು ಔಷಧಿಗಳ ಘೋಷಣೆಯ ಅಡಿಯಲ್ಲಿ ಇದು ಎರಡನೇ ರವಾನೆಯಾಗಿದೆ.
ಶ್ರೀಲಂಕಾದ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಮತ್ತು ಶ್ರೀಲಂಕಾ ಸರ್ಕಾರದ ಮಂತ್ರಿಗಳಾದ ಕೆಹೆಲಿಯಾ ರಂಬುಕ್ವೆಲ್ಲಾ ಮತ್ತು ನಳಿನ್ ಫೆರ್ನಾಂಡೋ ರವಾನೆಯನ್ನು ಸ್ವಾಗತಿಸಿದರು.
2022 ರಲ್ಲಿ ಶ್ರೀಲಂಕಾದ ಜನರಿಗೆ ಭಾರತದ ಆರ್ಥಿಕ ಮತ್ತು ಮಾನವೀಯ ನೆರವು 3.5 ಶತಕೋಟಿ ಯುಎಸ್ ಡಾಲರ್ಗಳಷ್ಟಿದೆ. ಶ್ರೀಲಂಕಾದ ವಿವಿಧ ಭಾಗಗಳಲ್ಲಿ ಹಲವಾರು ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ಔಷಧಿಗಳ ಪೂರೈಕೆ, ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ, ಇತರರಿಗೆ ಪಡಿತರವನ್ನು ಹಸ್ತಾಂತರ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.