ನವದೆಹಲಿ: ಉಪರಾಷ್ಟ್ರಪತಿ, ಎಂ. ವೆಂಕಯ್ಯ ನಾಯ್ಡು ಅವರು ಮೂರು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಭಾನುವಾರ ಕತಾರ್ನ ದೋಹಾಗೆ ಆಗಮಿಸಿದರು. ದೋಹಾ ವಿಮಾನ ನಿಲ್ದಾಣದಲ್ಲಿ ಕತಾರ್ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸೊಲ್ತಾನ್ ಬಿನ್ ಸಾದ್ ಅಲ್ ಮುರೈಖಿ ಮತ್ತು ಇತರ ಗಣ್ಯರು ಅವರನ್ನು ಬರಮಾಡಿಕೊಂಡರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಉಪರಾಷ್ಟ್ರಪತಿಗೆ ದೋಹಾ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಸ್ವಾಗತ ಮತ್ತು ಗಾರ್ಡ್ ಆಫ್ ಆನರ್ ನೀಡಲಾಯಿತು ಎಂದಿದ್ದಾರೆ.
ಇದಕ್ಕೂ ಮೊದಲು, ಉಪರಾಷ್ಟ್ರಪತಿ ನಾಯ್ಡು ಅವರು ಸೆನೆಗಲ್ ಗಣರಾಜ್ಯಕ್ಕೆ ತಮ್ಮ ಮೂರು ದಿನಗಳ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿದರು. ಸೆನೆಗಲ್ನಲ್ಲಿ, ಅವರು ಶುಕ್ರವಾರ ರಾಜಧಾನಿ ಡಾಕರ್ನಲ್ಲಿ ಸೆನೆಗಲ್ನ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಮೌಸ್ತಫಾ ನಿಯಾಸ್ಸೆ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಉಪರಾಷ್ಟ್ರಪತಿ ಅವರು ಗಬೊನ್, ಸೆನೆಗಲ್ ಮತ್ತು ಕತಾರ್ಗೆ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಬುಧವಾರ ಡಾಕರ್ ತಲುಪಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ರಾಜ್ಯ ಸಚಿವ ಡಾ. ಭಾರತಿ ಪವಾರ್ ಮತ್ತು ಮೂವರು ಸಂಸತ್ ಸದಸ್ಯರಾದ ಸುಶೀಲ್ ಕುಮಾರ್ ಮೋದಿ, ವಿಜಯ್ ಪಾಲ್ ಸಿಂಗ್ ತೋಮರ್ ಮತ್ತು ಪಿ. ರವೀಂದ್ರನಾಥ್ ಸೇರಿದಂತೆ ಉನ್ನತ ಮಟ್ಟದ ನಿಯೋಗ ನಾಯ್ಡು ಅವರ ಜೊತೆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.