ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ವಾದ-ವಿವಾದಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರು, ಮಕ್ಕಳಿಗೆ ನಾವು ಸತ್ಯವನ್ನು ಕಲಿಸಬೇಕಿದೆಯೇ ಹೊರತು ಸಿದ್ಧಾಂತವನ್ನು ಅಲ್ಲ ಎಂದು ಹೇಳಿದ್ದಾರೆ.
“ಸತ್ಯವನ್ನು ಶೋಧಿಸಿ ಅದನ್ನು ಪಠ್ಯಕ್ರಮದಲ್ಲಿ ಅಳವಡಿಸಿ ವಿದ್ಯಾರ್ಥಿಗಳಿಗೆ ಕಲಿಸಬೇಕು. ಸಿದ್ಧಾಂತಗಳನ್ನು ಕಲಿಸಬಾರದು. ಸರ್ಕಾರ ಈ ನಿಟ್ಟಿನಲ್ಲಿ ಪಠ್ಯ ಪರಿಷ್ಕರಣೆಗೆ ಮುಂದಾದರೆ ಕೆಲವರು ನಾನಾ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ” ಎಂದಿದ್ದಾರೆ.
“ಹಿಂದೆ ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿಗೆ ನನ್ನನ್ನು ನೇಮಿಸಲಾಗಿತ್ತು. ಗಾಂಧಿ ಕುಟುಂಬದ ಆಪ್ತ ಪಾರ್ಥಸಾರಥಿಯವರು ಇದರ ಅಧ್ಯಕ್ಷರಾಗಿದ್ದರು. ಅವರು ದೇಶದ ಏಕತೆಗಾಗಿ ಪಠ್ಯಕ್ರಮದಲ್ಲಿನ ಕಲ್ಮಶವನ್ನು ತೆಗೆದು ಹಾಕಬೇಕಿದೆ ಎಂದಿದ್ದರು. ಇದರ ಅರ್ಥ ಏನು ಎಂದು ನಾನು ಕೇಳಿದ್ದಕ್ಕೆ ಔರಂಗಜೇಬ ದೇಗುಲ ಕೆಡವಿದ, ಕಾಶಿಯಲ್ಲಿ ಮಸೀದಿ ಕಟ್ಟಿದ ಎಂದೆಲ್ಲ ಪಾಠದಲ್ಲಿ ಹೇಳುವ ಅಗತ್ಯವಿಲ್ಲ ಎಂದಿದ್ದರು. ಇದನ್ನು ನಾನು ಪ್ರಶ್ನೆ ಮಾಡಿದ್ದೆ. ಆ ಬಳಿಕ ನನ್ನನ್ನು ಸಮಿತಿಯಿಂದಲೇ ತೆಗೆದುಹಾಕಲಾಯಿತು ಮತ್ತು ಕಮ್ಯುನಿಸ್ಟ್ ನಿಷ್ಠರನ್ನು ನೇಮಿಸಲಾಯಿತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.