ನವದೆಹಲಿ: ಭಾರತದಲ್ಲಿ ಸ್ಟಾರ್ಟ್ಅಪ್ಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಸ್ಟಾರ್ಟ್ಅಪ್ಗಳು ಭಾರತದ ಮತ್ತು ಪ್ರಪಂಚದ ಭವಿಷ್ಯದ ಆರ್ಥಿಕತೆಯನ್ನು ನಿರ್ಧರಿಸುತ್ತವೆ ಎಂದು ಹೇಳಿದ್ದಾರೆ.
ಸ್ಟಾರ್ಟ್ಅಪ್ ಆಂದೋಲನವು ಒದಗಿಸಿದ ಉತ್ತೇಜನ ಸರ್ಕಾರದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ ಎಂದಿರುವ ಅವರು, ಭಾರತೀಯ ಸ್ಟಾರ್ಟ್ಅಪ್ಗಳನ್ನು ಆರ್ಥಿಕತೆಯ ಭವಿಷ್ಯ ಎಂದು ಕರೆದಿದ್ದಾರೆ.
”ಸ್ಟಾರ್ಟ್ಅಪ್ಗಳು ಭಾರತದ ಭವಿಷ್ಯದ ಆರ್ಥಿಕತೆಯನ್ನು ನಿರ್ಧರಿಸಲಿವೆ, ಅದು ವಿಶ್ವದ ಭವಿಷ್ಯದ ಆರ್ಥಿಕತೆಯನ್ನು ನಿರ್ಧರಿಸಲಿದೆ” ಎಂದು ಹೇಳಿದರು.
”ಭಾರತದಲ್ಲಿ, ನಾವು ನಮ್ಮ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ 2016 ರ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಪ್ರಾರಂಭಿಸಿದ್ದೇವೆ ಮತ್ತು ಇಂದು, ನಾವು ಕೇವಲ ಐದು-ಆರು ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿ ಬೆಳೆದಿದ್ದೇವೆ” ಎಂದು ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಆಯೋಜಿಸಿದ್ದ ಸ್ಟಾರ್ಟ್ಅಪ್ಗಳ ಕಾರ್ಯಕ್ರಮವೊಂದರಲ್ಲಿ ಸಿಂಗ್ ಹೇಳಿದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾತನಾಡಿ, ಭಾರತೀಯ ಸ್ಟಾರ್ಟ್ಅಪ್ಗಳು ವಾಸ್ತವವಾಗಿ ಇತಿಹಾಸವನ್ನು ಬರೆಯುತ್ತಿವೆ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ಇಡೀ ಜಗತ್ತನ್ನು ಬೆರಗುಗೊಳಿಸಿವೆ ಎಂದಿದ್ದಾರೆ.
”ಇಂದು ನವ ಭಾರತವು ಸುರಕ್ಷಿತ ಭವಿಷ್ಯಕ್ಕಾಗಿ ನೋಡುತ್ತಿಲ್ಲ. ಇದು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ, ನಾವೀನ್ಯತೆ ಮತ್ತು ಇನ್ಕ್ಯಬೇಷನ್ಗೆ ಸಿದ್ಧವಾಗಿದೆ ಮತ್ತು ಇಂದ ಸುಮಾರು 70,000 ಪ್ಲಸ್ ಸ್ಟಾರ್ಟ್ಅಪ್ಗಳು ನಮ್ಮ ಬಳಿ ಇವೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.