ನವದೆಹಲಿ: ತೀವ್ರ ಅಗತ್ಯ ಎದುರಿಸುತ್ತಿರುವ, ಸ್ನೇಹ ಪರ ಮತ್ತು ಸಾಲ ಪತ್ರ ಹೊಂದಿರುವ ರಾಷ್ಟ್ರಗಳಿಗೆ ಭಾರತವು ಗೋಧಿಯ ರಫ್ತು ಮಾಡಲು ಅನುಮತಿ ನೀಡುವುದನ್ನು ಮುಂದುವರಿಸಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಗೋಯಲ್ ಈ ವಿಷಯ ತಿಳಿಸಿದರು.
ಈ ವರ್ಷ ಗೋಧಿ ಉತ್ಪಾದನೆಯಲ್ಲಿ 7 ರಿಂದ 8 ಪ್ರತಿಶತ ಏರಿಕೆ ನಿರೀಕ್ಷಿಸಲಾಗಿದೆ ಆದರೆ ತೀವ್ರ ಶಾಖದಿಂದಾಗಿ ಆರಂಭಿಕ ಕೊಯ್ಲು ಮತ್ತು ಉತ್ಪಾದನೆ ನಷ್ಟವಾಯಿತು ಎಂದು ಗೋಯಲ್ ತಿಳಿಸಿದ್ದಾರೆ.
ಈ ಪರಿಸ್ಥಿತಿಯನ್ನು ಗಮನಿಸಿದರೆ ದೇಶವು ಉತ್ಪಾದಿಸುತ್ತಿರುವ ಗೋಧಿ ದೇಶೀಯ ಬಳಕೆಗೆ ಸಾಕಾಗುತ್ತದೆ ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಗೋಧಿ ಮಾರುಕಟ್ಟೆಯಲ್ಲಿ ಭಾರತ ಎಂದಿಗೂ ಮಹತ್ವದ ಪಾತ್ರ ಹೊಂದಿರಲಿಲ್ಲ ಮತ್ತು ಗೋಧಿಯ ರಫ್ತು ಕೇವಲ ಎರಡು ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂದು ಅವರು ಹೇಳಿದರು.
ಕಳೆದ ವರ್ಷ ಏಳು ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಲಾಗಿತ್ತು ಮತ್ತು ರಷ್ಯಾ-ಉಕ್ರೇನ್ ನಡುವಿನ ಯುದ್ಧವು ಆರಂಭವಾದ ಕಳೆದ ಎರಡು ತಿಂಗಳ ಅವಧಿಯಲ್ಲಿ ಹೆಚ್ಚಿನ ಭಾಗವನ್ನು ರಫ್ತು ಮಾಡಲಾಗಿದೆ ಎಂದು ಗೋಯಲ್ ಉಲ್ಲೇಖಿಸಿದ್ದಾರೆ.
ಭಾರತದ ಗೋಧಿ ರಫ್ತು ವಿಶ್ವ ವ್ಯಾಪಾರದ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ ಮತ್ತು ನಮ್ಮ ರಫ್ತು ನಿಯಂತ್ರಣವು ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಬಾರದು ಎಂದು ಅವರು ಹೇಳಿದರು. ತೀವ್ರ ಅಗತ್ಯ ಎದುರಿಸುತ್ತಿರುವ ದೇಶಗಳು ಮತ್ತು ನೆರೆಹೊರೆಗಳಿಗೆ ರಫ್ತು ಮಾಡಲು ಭಾರತವು ಅವಕಾಶ ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.