ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪದಕಗಳಲ್ಲಿ ಇದ್ದ “ಶೇರ್-ಇ-ಕಾಶ್ಮೀರ” ಶೇಖ್ ಅಬ್ದುಲ್ಲಾ ಅವರ ಚಿತ್ರವನ್ನು ತೆಗೆದು ರಾಷ್ಟ್ರೀಯ ಲಾಂಛನವನ್ನು ಹಾಕಲಾಗುವುದು ಎಂದು ಅಲ್ಲಿನ ಆಡಳಿತ ಘೋಷಣೆ ಮಾಡಿದೆ.
“ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕ ಯೋಜನೆಯ ಪ್ಯಾರಾ 4 ಗೆ ಮಾರ್ಪಾಡು ಮಾಡಲಾಗಿದ್ದು, ಪದಕದಲ್ಲಿನ ʼಶೇರ್-ಇ-ಕಾಶ್ಮೀರ್ʼ ಶೇಖ್ ಮೊಹಮ್ಮದ್ ಅಬ್ದುಲ್ಲಾ ಚಿತ್ರವನ್ನು ಭಾರತ ಸರ್ಕಾರದ ರಾಷ್ಟ್ರೀಯ ಲಾಂಛನಕ್ಕೆ ಬದಲಾಯಿಸಲಾಗುತ್ತದೆ. ಪದಕದ ಮತ್ತೊಂದು ಬದಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯ ಲಾಂಛನದೊಂದಿಗೆ ‘ಶೌರ್ಯಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕ’ ಮತ್ತು ಪ್ರತಿಭಾನ್ವಿತ ಸೇವೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕ’ ಎಂದು ಕೆತ್ತಲಾಗಿದೆ” ಎಂದು ಹಣಕಾಸು ಆಯುಕ್ತ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಗೋಯಲ್ ಆದೇಶದಲ್ಲಿ ತಿಳಿಸಿದ್ದಾರೆ.
ಪೊಲೀಸ್ ಪದಕಗಳನ್ನು 2001 ರಲ್ಲಿ ಸ್ಥಾಪಿಸಲಾಯಿತು ಮತ್ತು ಹೊಸ ವರ್ಷ, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಎರಡು ವಿಭಾಗಗಳಲ್ಲಿಶೌರ್ಯ ಮತ್ತು ಅರ್ಹತೆಗಾಗಿ ಇದನ್ನು ನೀಡಲಾಗುತ್ತದೆ.
ಶೇರ್-ಇ-ಕಾಶ್ಮೀರ್’ ಎಂಬುದು ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರನ್ನು ಉಲ್ಲೇಖಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.