ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೊಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಮೊದಲ ದಿನವೇ ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಪ್ರಯತ್ನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
ಬೊಮ್ಮಾಯಿ ಅವರು ದಾವೋಸ್ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕರ್ನಾಟಕ ಪೆವಿಲಿಯನ್ ಅನ್ನು ನಿನ್ನೆ ಉದ್ಘಾಟಿಸಿದದ್ದಾರೆ. ವಿವಿಧ ವಲಯಗಳ ಬಲಿಷ್ಠ ಪರಿಸರ ವ್ಯವಸ್ಥೆಗೆ ತವರಾಗಿರುವ ಕರ್ನಾಟಕದ ಪ್ರಮುಖ ಸಾಮರ್ಥ್ಯಗಳನ್ನು ಇದು ಪ್ರದರ್ಶಿಸಲಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿಗಳು 10 ಸಾವಿರ ಉದ್ಯೋಗ ಸೃಷ್ಟಿಸುವ 2000 ಕೋಟಿ ರೂಪಾಯಿಗಳ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹಿಟಾಚಿ, ಜ್ಯುಬಿಲಿಯಂಟ್ ಸಮೂಹ, ಹೀರೋ ಮೋಟೊಕಾರ್ಪ್, ಸೀಮನ್ಸ್ಗಳ ಸಿಇಒಗಳ ಜೊತೆ ಸೋಮವಾರ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಕರ್ನಾಟಕದಲ್ಲಿ 4 ಶಾಪಿಂಗ್ ಮಾಲ್, ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳ ಸ್ಥಾಪನೆಗೆ ಲುಲು ಗ್ರೂಪ್ ಮುಂದಾಗಿದೆ. ಅಲ್ಲದೆ ಜ್ಯುಬಿಲಿಯಂಟ್ ರಾಜ್ಯದಲ್ಲಿ ಫುಡ್ ವರ್ಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಬಯಸಿದೆ ಎನ್ನಲಾಗಿದೆ. ಹಿಟಾಚಿ ಎನರ್ಜಿ ಸಂಸ್ಥೆಯು ರಾಜ್ಯದಲ್ಲಿ ಈ ವಿಚಾರ ಜಿಂಗ್ ಮೂಲಸೌಕರ್ಯಗಳ ಸ್ಥಾಪನೆಗೆ ಆಸಕ್ತಿ ತೋರಿಸಿದೆ. ಸೀಮೆನ್ಸ್ ವೈದ್ಯಕೀಯ ಸಲಕರಣೆ ಘಟಕ ಸ್ಥಾಪಿಸಲು ಆಸಕ್ತಿ ತೋರಿಸಿದೆ ಎನ್ನಲಾಗಿದೆ.
CM @BSBommai Inaugurated the Karnataka Pavilion at the World Economic Forum, Davos. Karnataka is home to a strong ecosystem for various sectors and the participation will aid showcasing the state’s key strengths.#WEF2022 #WorldEconomicForum #KarnatakaAtDavos #BuildForTheWorld pic.twitter.com/HBRSvFc4vo
— CM of Karnataka (@CMofKarnataka) May 23, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.