ಬೆಂಗಳೂರು: ದಲಿತರು, ಹಿಂದುಳಿದವರು ಅಥವಾ ಹಿಂದುಗಳು, ಮುಸಲ್ಮಾನರು ಮತ್ತು ಕ್ರೈಸ್ತರು- ಹೀಗೆ ಎಲ್ಲರೂ ಗೋಮಾಂಸವನ್ನು ತಿನ್ನುತ್ತಾರೆ. ಆದ್ದರಿಂದ ಗೋಮಾಂಸ ನಿಷೇಧಿಸಬಾರದು ಎಂದು ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯರವರು ನಿನ್ನೆ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯರಿಗೆ ಗೋಮಾಂಸ ತಿನ್ನಬೇಕಿನಿಸದರೆ ತಿನ್ನಲಿ. ಆದರೆ, ವಕಾಲತ್ತು ವಹಿಸುವುದನ್ನು ಅವರು ಬಿಡಬೇಕು ಎಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿದ ಅವರು, ಇವತ್ತು ಸರಕಾರ ಒಂದು ತೀರ್ಮಾನ ತೆಗೆದುಕೊಂಡಿದೆ. ಅಂಥ ತೀರ್ಮಾನಕ್ಕೆ ಸಹಕರಿಸುವುದು ವಿರೋಧ ಪಕ್ಷಗಳ ನೀತಿಯಾಗಬೇಕು. ಇದರಲ್ಲಿ ಸುಮ್ಮನೆ ಜನರನ್ನು ಎತ್ತಿಕಟ್ಟುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವಾಗಲೂ ಮಾಂಸದೂಟ ಉಂಡೇ ಹೋಗಿದ್ದರು. ಬಳಿಕ ಅದನ್ನು ಸಮರ್ಥಿಸಿಕೊಂಡಿದ್ದರು. ಬಿಜೆಪಿ, ಆರ್ಎಸ್ಎಸ್ ವಿರುದ್ಧ ಮಾತನಾಡುವುದು ಸಿದ್ದರಾಮಯ್ಯರಿಗೆ ಒಂದು ಚಟ ಎಂದು ಟೀಕಿಸಿದರು.
ದಲಿತರು, ಹಿಂದುಳಿದವರನ್ನು ಎತ್ತಿ ಕಟ್ಟುವುದು ಅವರಿಗೆ ಒಂದು ಚಟವಾಗಿದೆ. ಇಂಥಹ ಚಟದಿಂದ ದೂರವಾಗಿ ಎಂದು ಒತ್ತಾಯಿಸಿದರು. ವಿಷಬೀಜ ಬಿತ್ತುವ ಕೆಲಸವನ್ನು ಸಿದ್ದರಾಮಯ್ಯ ಮಾಡಬಾರದು ಎಂದು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.