ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಆಡಳಿತದಲ್ಲಿ ಈಶಾನ್ಯ ಭಾಗದ ಅಭಿವೃದ್ಧಿ ಪಯಣ ಅಭೂತಪೂರ್ವವಾಗಿ ಬದಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.
“ಸಂಪುಟ ಸಭೆ ಅಥವಾ ಪ್ರಮುಖ ಸರ್ಕಾರಿ ಕಾರ್ಯಕ್ರಮವಾಗಿರಬಹುದು, ಪ್ರಧಾನಿ ಮೊದಲು ಈಶಾನ್ಯ ರಾಜ್ಯಗಳನ್ನು ಅಭಿವೃದ್ಧಿಪಡಿಸಲು ಸಲಹೆಗಳನ್ನು ಕೇಳುತ್ತಾರೆ. ಅರುಣಾಚಲ ಪ್ರದೇಶದ ಎಲ್ಲಾ ಗ್ರಾಮಗಳು ಈಗ ರಸ್ತೆ, ವಿದ್ಯುತ್ ಮತ್ತು ನೀರು ಪೂರೈಕೆಯ ಮೂಲಕ ಸಂಪರ್ಕ ಹೊಂದಿವೆ. ಇವು ದಶಕದ ಹಿಂದೆ ದೂರದ ಕನಸಿನಂತೆ ಇದ್ದವು” ಎಂದು ಸಚಿವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಅರುಣಾಚಲ ಪ್ರದೇಶದ ಪಶ್ಚಿಮ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ರಿಜ್ಜು, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಭಾರತ-ಚೀನಾ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಹಳ್ಳಿಗಳಲ್ಲಿ ಸರಿಯಾದ ರಸ್ತೆಗಳನ್ನು ನಿರ್ಮಿಸಲು ಬಯಸಿರಲಿಲ್ಲ, ಇದರಿಂದ ಅನುಕೂಲವಾಗಬಹುದೆಂಬ ಭಯ ಅವರಿಗಿತ್ತು, ಚೀನಾ ಸೈನಿಕರಿಗೆ ಅವರು ಭಯಪಡುತ್ತಿದ್ದರು” ಎಂದಿದ್ದಾರೆ.
ಭಾನುವಾರ ಅರುಣಾಚಲ ಪ್ರದೇಶದ ನಮಸೈಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಿಜ್ಜು, ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಸನ್ನಿವೇಶ ಬದಲಾಗಿದೆ ಎಂದಿದ್ದಾರೆ.
“ಸ್ವಾತಂತ್ರ್ಯದ ನಂತರ, ಚೀನಾದ ಸೇನೆ ಮತ್ತು ಜನರು ಭಾರತದ ಪ್ರದೇಶಕ್ಕೆ ನುಗ್ಗಿ ಶಾಂತಿ ಕದಡುತ್ತಾರೆ ಎಂಬ ಭಯದಿಂದ ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣವನ್ನು ತಪ್ಪಿಸುವ ನೀತಿಗೆ ಸರ್ಕಾರಗಳು ಅಂಟಿಕೊಂಡಿವೆ ಎಂದು ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಸಂಸತ್ತಿನಲ್ಲಿ ಬಹಿರಂಗವಾಗಿ ಬಹಿರಂಗಪಡಿಸಿದ್ದರು. ಈ ಮನೋಭಾವದಿಂದಲೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಜನರ ಅಭಿವೃದ್ಧಿಯ ಬಗ್ಗೆ ಯೋಚಿಸದೆ ದಶಕಗಳ ಕಾಲ ದೇಶವನ್ನು ಆಳಿದರು”ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.