ಬೆಂಗಳೂರು: ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯುವತಿಯೊಬ್ಬಳು ತನ್ನ ವಿಶಿಷ್ಟವಾದ ಪ್ರತಿಭೆ ಮೂಲಕ ಈಗ ದೇಶದ ಗಮನ ಸೆಳೆದಿದ್ದಾಳೆ.
ತೃಪ್ತಿ ಮಂಜುನಾಥ್ ನಾಯಕ್ 8 ಹಲಸಿನ ಮರದ ಎಲೆಯಲ್ಲಿ ರಾಷ್ಟ್ರಗೀತೆಯನ್ನು ಬರೆದಿದ್ದಾಳೆ. ಈ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾಳೆ.
“ಗರಿಷ್ಠ ಸಂಖ್ಯೆಯ ಹಲಸಿನ ಎಲೆಗಳ ಮೇಲೆ ರಾಷ್ಟ್ರಗೀತೆಯನ್ನು ಕೆತ್ತಿದ ದಾಖಲೆಯನ್ನು ಕರ್ನಾಟಕದ ಉತ್ತರ ಕನ್ನಡದ ತೃಪ್ತಿ ಮಂಜುನಾಥ್ ನಾಯ್ಕ್ (ಜನನ ಮಾರ್ಚ್ 27, 1997) ಸ್ಥಾಪಿಸಿದ್ದಾರೆ. ಅವರು ಮಾರ್ಚ್ 19, 2022 ರಂದು ದೃಢಪಡಿಸಿದಂತೆ 8 ಹಲಸಿನ ಎಲೆಗಳ ಮೇಲೆ ಭಾರತದ ರಾಷ್ಟ್ರಗೀತೆಯನ್ನು (ಹಿಂದಿ ಭಾಷೆಯಲ್ಲಿ) ಬರೆದಿದ್ದಾರೆ” ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವೆಬ್ಸೈಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.