ನವದೆಹಲಿ: 75 ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದ ಸದಸ್ಯರಾದ ನಟ ಆರ್ ಮಾಧವನ್ ಅವರು ಗುರುವಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ “ಸೂಕ್ಷ್ಮ-ಆರ್ಥಿಕತೆ”ಯ ಯಶಸ್ಸನ್ನು ಶ್ಲಾಘಿಸಿದ್ದಾರೆ.
“ರೈತರಿಗೆ ಸ್ಮಾರ್ಟ್ಫೋನ್ ಬಳಸುವುದು ಅಥವಾ ಲೆಕ್ಕಪತ್ರ ನಿರ್ವಹಣೆ ಮಾಡುವುದು ಗೊತ್ತಿಲ್ಲದ ದೇಶದಲ್ಲಿ ಡಿಜಿಟಲೀಕರಣವು ದೊಡ್ಡ ವಿಪತ್ತು ಎಂದೇ ಅನೇಕರು ನಂಬಿದ್ದರು, ಆದರೆ ಒಂದೆರಡು ವರ್ಷಗಳಲ್ಲಿ ಇಡೀ ಚಿತ್ರಣವೇ ಬದಲಾಗಿದೆ” ಎಂದು ಮಾಧವನ್ ಕ್ಯಾನೆಸ್ನಲ್ಲಿ ಹೇಳಿದ್ದಾರೆ.
“ಭಾರತದಲ್ಲಿ ಸೂಕ್ಷ್ಮ ಆರ್ಥಿಕತೆಯ ಅತಿ ದೊಡ್ಡ ಬಳಕೆದಾರರಲ್ಲಿ ಭಾರತವೂ ಒಂದಾಯಿತು. ರೈತರು ಹಣ ಪಡೆದಿದ್ದಾರೆಯೇ ಎಂದು ತಿಳಿದುಕೊಳ್ಳಲು ಫೋನ್ ಬಳಸಲು ಶಿಕ್ಷಣದ ಅಗತ್ಯವಿಲ್ಲದ ಕಾರಣ ಇದು ಸಂಭವಿಸಿದೆ. ಇದು ನವ ಭಾರತ” ಎಂದಿದ್ದಾರೆ.
ಕೇನ್ಸ್ನಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮಾಧವನ್ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.
ಮಾರ್ಚ್ ಡು ಫಿಲ್ಮ್ಸ್ (ಕ್ಯಾನ್ಸ್ ಫಿಲ್ಮ್ ಮಾರ್ಕೆಟ್) ನಲ್ಲಿ ಭಾರತವನ್ನು ಈ ವರ್ಷ ಗೌರವ ರಾಷ್ಟ್ರ ಎಂದು ಹೆಸರಿಸಲಾಗಿದೆ. ಭಾರತ ತಂಡದ ನೇತೃತ್ವವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ವಹಿಸಿದ್ದಾರೆ. ಆರ್ ಮಾಧವನ್, ನವಾಜುದ್ದೀನ್ ಸಿದ್ದಿಕಿ, ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್, ಶೇಖರ್ ಕಪೂರ್, ಪ್ರಸೂನ್ ಜೋಶಿ ಮತ್ತು ಇತರರೊಂದಿಗೆ ಕೇನ್ಸ್ 2022 ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದಾರೆ.
When our PM @narendramodi introduced a micro economy & digital currency there was a furore…it is going to be a disaster. In a couple of years the whole story changed & India became one of the largest users of micro economy in the world. This is #NewIndia – @ActorMadhavan pic.twitter.com/yhuuZf8iHI
— Office of Mr. Anurag Thakur (@Anurag_Office) May 19, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.