ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಮೈಕಾಕ್ಕೆ ಭೇಟಿ ನೀಡಿದ ಮೂರನೇ ಮತ್ತು ಕೊನೆಯ ದಿನವಾದ ನಿನ್ನೆ ಜಮೈಕಾ ಸಂಸತ್ತಿನ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು, ವ್ಯಾಪಾರ, ರೈಲ್ವೆ, ಕೃಷಿ, ಆತಿಥ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಪರಸ್ಪರ ಕಲಿಕೆಗೆ ಅಪಾರ ಅವಕಾಶವಿದೆ. 2030 ರ ಜಮೈಕಾದ ದೃಷ್ಟಿಕೋನವನ್ನು ಭಾರತ ಹಂಚಿಕೊಳ್ಳುತ್ತದೆ ಎಂದು ಹೇಳಿದರು.
ಎರಡು ಪ್ರಜಾಪ್ರಭುತ್ವಗಳು ಸ್ನೇಹ, ಸಹಕಾರ ಮತ್ತು ಸಮೃದ್ಧಿಯ ಹೊಸ ಎತ್ತರವನ್ನು ತಲುಪಲಿ ಎಂಬ ಹಾರೈಕೆಯೊಂದಿಗೆ ಕೋವಿಂದ್ ತಮ್ಮ ಭಾಷಣವನ್ನು ಮುಗಿಸಿದರು.
ಕಿಂಗ್ಸ್ ಹೌಸ್ನಲ್ಲಿ ಗವರ್ನರ್ ಜನರಲ್ ಆಯೋಜಿಸಿದ ರಾಜ್ಯ ಔತಣಕೂಟದಲ್ಲಿ ಭಾಗಿಯಾದರು.
ಜಮೈಕಾಕ್ಕೆ ರಾಷ್ಟ್ರಪತಿ ಕೋವಿಂದ್ ಅವರ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಗಿಡಗಳನ್ನು ನೆಡಲಾಗಿದೆ. ಅದರ ಫಲವು ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಪೋಷಿಸುತ್ತದೆ.
ಭೇಟಿಯ ಎರಡನೇ ಹಂತದಲ್ಲಿ, ರಾಷ್ಟ್ರಪತಿ ಕೋವಿಂದ್ ಅವರು ನಿನ್ನೆ ರಾತ್ರಿ ಜಮೈಕಾದಿಂದ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ಗೆ ತೆರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.