ನವದೆಹಲಿ: ಭಾರತದ ಮೊದಲ “ಅಮೃತ ಸರೋವರ”ವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮತ್ತು ಉತ್ತರ ಪ್ರದೇಶದ ಜಲ ಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಅವರು ಇಂದು ಉತ್ತರ ಪ್ರದೇಶದ ರಾಂಪುರದ ಪಟ್ವಾಯಿಯಲ್ಲಿ ಉದ್ಘಾಟಿಸಲಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ಫೂರ್ತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ಈ ಭವ್ಯವಾದ “ಅಮೃತ ಸರೋವರ” ನಿರ್ಮಿಸಲಾಗಿದೆ ಎಂದು ನಖ್ವಿ ಹೇಳಿದ್ದಾರೆ.
ಈ ಭವ್ಯವಾದ “ಅಮೃತ ಸರೋವರ”ವನ್ನು ಅತ್ಯಂತ ಕಡಿಮೆ ಸಮಯದಲ್ಲಿ ತೆರೆಯುವಲ್ಲಿ ಸಾಮಾನ್ಯ ಜನರು, ಗ್ರಾಮಸ್ಥರ ಸಹಭಾಗಿತ್ವ ಮತ್ತು ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾಡಳಿತದ ತ್ವರಿತತೆ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಕಳೆದ ತಿಂಗಳು “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ, ರಾಂಪುರದ ಪಟ್ವಾಯಿಯಲ್ಲಿ ಪ್ರಧಾನಿ ಈ “ಅಮೃತ ಸರೋವರ” ವನ್ನು ಪ್ರಸ್ತಾಪಿಸಿದ್ದರು ಎಂದು ಸಚಿವರು ಹೇಳಿದರು.
“ಮನ್ ಕಿ ಬಾತ್” ನಲ್ಲಿ ಪ್ರಧಾನಿ ಮೋದಿ, “ಅಮೃತ್ ಸರೋವರದ ಸಂಕಲ್ಪವನ್ನು ಮಾಡಿದ ನಂತರ, ಅನೇಕ ಸ್ಥಳಗಳಲ್ಲಿ ಅದರ ಕೆಲಸವನ್ನು ತ್ವರಿತ ಗತಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ತಿಳಿಯಲು ನಾನು ಬಯಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.
ಮನ್ ಕೀ ಬಾತ್ನಲ್ಲಿ ಮಾತನಾಡಿದ್ದ ಮೋದಿ, “ಯುಪಿಯ ರಾಂಪುರದ ಗ್ರಾಮ ಪಂಚಾಯತ್ ಪಟ್ವಾಯಿಯ ಗ್ರಾಮ ಸಭೆಯ ಜಮೀನಿನಲ್ಲಿ ಒಂದು ಕೆರೆ ಇತ್ತು, ಆದರೆ ಅದು ಹೊಲಸು ಮತ್ತು ಕಸದ ರಾಶಿಯಿಂದ ತುಂಬಿತ್ತು.ಬಹಳ ಪರಿಶ್ರಮದಿಂದ, ಸ್ಥಳೀಯರ ನೆರವಿನಿಂದ, ಸ್ಥಳೀಯ ಶಾಲಾ ಮಕ್ಕಳ ನೆರವಿನಿಂದ ಕಳೆದ ಕೆಲವು ವಾರಗಳಲ್ಲಿ ಆ ಕೊಳಕು ಕೊಳವನ್ನು ಮಾರ್ಪಡಿಸಲಾಗಿದೆ. ಈಗ ಆ ಕೆರೆಯ ದಡದಲ್ಲಿ ತಡೆಗೋಡೆ, ಗಡಿ ಗೋಡೆ, ಫುಡ್ ಕೋರ್ಟ್, ಕಾರಂಜಿ, ದೀಪಾಲಂಕಾರ ಹೀಗೆ ಹಲವು ವ್ಯವಸ್ಥೆ ಮಾಡಲಾಗಿದೆ. ಈ ಪ್ರಯತ್ನಕ್ಕಾಗಿ ನಾನು ರಾಂಪುರದ ಪಟ್ವಾಯಿ ಗ್ರಾಮ ಪಂಚಾಯತ್, ಗ್ರಾಮದ ಜನರು ಮತ್ತು ಅಲ್ಲಿನ ಮಕ್ಕಳನ್ನು ಅಭಿನಂದಿಸುತ್ತೇನೆ” ಎಂದಿದ್ದರು.
ಇದಲ್ಲದೆ, ಈ “ಅಮೃತ ಸರೋವರ” ಪರಿಸರವನ್ನು ರಕ್ಷಿಸಲು ಮತ್ತು ನೀರನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ, ಇದು ಹತ್ತಿರದ ಪ್ರದೇಶಗಳ ಜನರಿಗೆ ಒಂದು ಆಕರ್ಷಣೆಯಾಗಿದೆ ಎಂದು ನಖ್ವಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.