ನವದೆಹಲಿ: ಅಧಿಕಾರದಲ್ಲಿರುವ ಪ್ರತಿನಿಧಿಗಳು ದರ್ಪ ತೋರುತ್ತಾರೆ ಮತ್ತು ಇತರರನ್ನು ತಮಗಿಂತ ಕೆಳಗೆ ಎಂಬಂತೆ ವರ್ತಿಸುತ್ತಾರೆ ಎಂಬುಂದು ಸಾಮಾನ್ಯರ ಮನೋಭಾವ. ಕೆಲವು ರಾಜಕಾರಣಿಗಳು ಇದೇ ರೀತಿ ನಡೆದುಕೊಂಡಿದ್ದಾರೆ ಕೂಡ. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕಿಂತ ವ್ಯತಿರಿಕ್ತವಾಗಿ ನಡೆದುಕೊಂಡು ಜನರ ಶಬ್ಬಾಷ್ಗರಿ ಪಡೆದುಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವರು ಮಾನವೀಯತೆ ಮೆರೆದಿದ್ದಾರೆ. ಕಾರ್ಯಕ್ರಮದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ವ್ಯವಸ್ಥಾಪಕ ನಿರ್ದೇಶಕ ಪದ್ಮಜಾ ಚುಂಡೂರು ಅವರು ಮಾತಿನ ಮಧ್ಯೆ ಒಂದು ಲೋಟ ನೀರು ಕೊಡುವಂತೆ ಅಲ್ಲಿದ್ದವರನ್ನು ಕೇಳಿದ್ದರು. ಆದರೆ ಅವರಿಗೆ ನೀರು ಕೊಡಲು ಬಂದಿದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಸೀತಾತ್ರಾಮನ್ ವೇದಿಕೆಯತ್ತ ನಡೆದು ಚುಂಡೂರಿಗೆ ಒಂದು ಲೋಟ ನೀರು ನೀಡಿದರು. ಸೀತಾರಾಮನ್ ಅವರ ಕಾರ್ಯದಿಂದ ಪ್ರಭಾವಿತರಾದ ಪ್ರೇಕ್ಷಕರು ಅವರಿಗೆ ಚಪ್ಪಾಳೆ ತಟ್ಟಿದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ದೃಶಯದ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ನಿರ್ಮಲಾ ಸೀತಾರಾಮನ್ ಅವರ ಈ ಆಕರ್ಷಕ ನಡೆ ಅವರ ದೊಡ್ಡ ಹೃದಯ, ನಮ್ರತೆ ಮತ್ತು ಮೂಲ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಇಂದು ಇಂಟರ್ನೆಟ್ನಲ್ಲಿ ಹೃದಯವನ್ನು ಗೆಲ್ಲುವ ವೀಡಿಯೊ” ಎಂದು ಪ್ರಧಾನ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
This graceful gesture by FM Smt. @nsitharaman ji reflects her large heartedness, humility and core values.
A heart warming video on the internet today. pic.twitter.com/isyfx98Ve8
— Dharmendra Pradhan (@dpradhanbjp) May 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.