ನವದೆಹಲಿ: ಕಳೆದ 32 ವರ್ಷಗಳಿಂದ ಹರಿಯಾಣದ ರಾಖಿ ಗರ್ಹಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), 5000 ವರ್ಷಗಳಷ್ಟು ಹಳೆಯದಾದ ಆಭರಣ ತಯಾರಿಕೆ ಕಾರ್ಖಾನೆಯೊಂದನ್ನು ಉತ್ಖನನ ಮಾಡಿದೆ.
ರಾಖಿ ಗರ್ಹಿ ಒಂದು ಹಳ್ಳಿಯಾಗಿದ್ದು, ಇದು ಹರಿಯಾಣದ ಹಿಸಾರ್ ಜಿಲ್ಲೆಯ ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಅತ್ಯಂತ ಹಳೆಯ ಪುರಾತತ್ವ ಸ್ಥಳಗಳಲ್ಲಿ ಒಂದಾಗಿದೆ.
5000 ವರ್ಷಗಳಷ್ಟು ಹಳೆಯದಾದ ಆಭರಣ ತಯಾರಿಕೆ ಕಾರ್ಖಾನೆ ಮಾತ್ರವಲ್ಲದೇ ಮನೆಗಳ ರಚನೆ, ಅಡುಗೆ ಸಂಕೀರ್ಣ ಪತ್ತೆಯಾಗಿದೆ. ಈ ತಾಣ ಬಹಳ ಮುಖ್ಯವಾದ ವ್ಯಾಪಾರ ಕೇಂದ್ರವಾಗಿರಬೇಕೆಂಬ ಊಹೆ ಮಾಡಲಾಗಿದೆ. ಸಾವಿರಾರು ವರ್ಷಗಳಿಂದ ಬಚ್ಚಿಟ್ಟಿದ್ದ ತಾಮ್ರ, ಬಂಗಾರದ ಆಭರಣಗಳೂ ಪತ್ತೆಯಾಗಿವೆ.
ASI ಕಳೆದ ಎರಡು ತಿಂಗಳುಗಳಲ್ಲಿ ರಾಖಿ ಗರ್ಹಿಯಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ. ಸಾವಿರಾರು ಮಣ್ಣಿನ ಮಡಕೆಗಳು, ರಾಜ ಮುದ್ರೆಗಳು ಮತ್ತು ಮಕ್ಕಳ ಆಟಿಕೆಗಳನ್ನು ಸಹ ಉತ್ಖನನ ಮಾಡಲಾಗಿದೆ.
ಎಎಸ್ಐ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಡಾ.ಸಂಜಯ್ ಮಂಜುಳ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ನಾವು ಸಿನೌಲಿ, ಹಸ್ತಿನಾಪುರ ಮತ್ತು ರಾಖಿಗರ್ಹಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ರಾಖಿಗಢಿಯ ಜನರು ಹಸ್ತಿನಾಪುರದ ಜನರ ಪೂರ್ವಜರು ಎಂದು ಹೇಳಬಹುದು ಮತ್ತು ಇದರಿಂದ ಸಂಸ್ಕೃತಿಯು ಅಭಿವೃದ್ಧಿ ಮತ್ತು ವೇಗವನ್ನು ಪಡೆದುಕೊಂಡಿತು” ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ರಾಖಿಗರ್ಹಿಯು ಫೆಬ್ರವರಿ 2020 ರಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಐದು ಐಕಾನಿಕ್ ತಾಣಗಳಲ್ಲಿ ಒಂದಾಗಿದೆ. ಇತರ ತಾಣಗಳು ಉತ್ತರ ಪ್ರದೇಶದ ಹಸ್ತಿನಾಪುರ, ಅಸ್ಸಾಂನ ಶಿವಸಾಗರ್, ಗುಜರಾತ್ನ ಧೋಲಾವಿರಾ ಮತ್ತು ತಮಿಳುನಾಡಿನ ಆದಿಚನಲ್ಲೂರ್.
ಈಗಾಗಲೇ ಹಲವಾರು ಬಾರಿ ಇಲ್ಲಿ ಉತ್ಖನನ ಮಾಡಲಾಗಿದ್ದು, ಅನೇಕ ಪ್ರಾಚೀನ ಕುರುಹುಗಳು ಪತ್ತೆಯಾಗಿವೆ.
ಅಲ್ಲದೆ, ಎಎಸ್ಐ ಮತ್ತು ಹರಿಯಾಣ ಸರ್ಕಾರದ ನಡುವೆ ಪ್ರಕ್ರಿಯೆಯಲ್ಲಿರುವ ಒಪ್ಪಂದದ ಅನ್ವಯ ರಾಖಿಗರ್ಹಿಯ ಪ್ರಾಚೀನ ವಸ್ತುಗಳನ್ನು ರಾಜ್ಯವು 23 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಿರ್ಮಾಣ ಹಂತದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.