ಬೆಂಗಳೂರು: 12ನೇ ಶತಮಾನದಲ್ಲಿನ ಕ್ರಾಂತಿಕಾರಿ ಸಮಾಜ ಸುಧಾರಕ, ಮಹಾನ್ ಮಾನವತಾವಾದಿ ಬಸವಣ್ಣ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಮಾತ್ರವಲ್ಲದೇ ಇಂದು ಬಸವೇಶ್ವರ ಸರ್ಕಲ್ನಲ್ಲಿ ಬಸವ ಪ್ರತಿಮೆಗೆ ಗೌರವಾರ್ಪಣೆ ನೆರವೇರಿಸಿದ್ದಾರೆ.
ಟ್ವೀಟ್ ಮಾಡಿರುವ ಅಮಿತ್ ಶಾ, “ಬಸವ ಜಯಂತಿಯಂದು ಮಹಾನ್ ಚಿಂತಕ, ಜಗದ್ಗುರು ಶ್ರೀ ಬಸವೇಶ್ವರರಿಗೆ ನಮನಗಳು. ಅವರು ತಮ್ಮ ಸಂಪೂರ್ಣ ಜೀವನವನ್ನು ಮಾನವತೆಯ ಸೇವೆಯಲ್ಲಿ, ಬಡವರು ಮತ್ತು ದುರ್ಬಲರ ಸಬಲೀಕರಣಕ್ಕಾಗಿ ಮೀಸಲಿಟ್ಟರು. ಸೌಹಾರ್ದತೆ, ಸಹೋದರತೆ ಮತ್ತು ಸಹಾನುಭೂತಿಯನ್ನು ಸಮಾಜದಲ್ಲಿ ಪಸರಿಸಬೇಕೆಂಬ ಅವರ ಶ್ರೇಷ್ಠ ಬೋಧನೆಗಳು ನಮಗೆ ಸದಾ ಮಾರ್ಗದರ್ಶನವನ್ನು ನೀಡುತ್ತಿರುತ್ತದೆ” ಎಂದಿದ್ದಾರೆ.
ಟ್ವೀಟ್ ಮಾಡಿರುವ ಬೊಮ್ಮಾಯಿ, “ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತಾ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ” ಎಂದಿದ್ದಾರೆ.
ಬಸವ ಜಯಂತಿಯಂದು ಮಹಾನ್ ಚಿಂತಕ, ಜಗದ್ಗುರು ಶ್ರೀ ಬಸವೇಶ್ವರರಿಗೆ ನಮನಗಳು. ಅವರು ತಮ್ಮ ಸಂಪೂರ್ಣ ಜೀವನವನ್ನು ಮಾನವತೆಯ ಸೇವೆಯಲ್ಲಿ, ಬಡವರು ಮತ್ತು ದುರ್ಬಲರ ಸಬಲೀಕರಣಕ್ಕಾಗಿ ಮೀಸಲಿಟ್ಟರು. ಸೌಹಾರ್ದತೆ, ಸಹೋದರತೆ ಮತ್ತು ಸಹಾನುಭೂತಿಯನ್ನು ಸಮಾಜದಲ್ಲಿ ಪಸರಿಸಬೇಕೆಂಬ ಅವರ ಶ್ರೇಷ್ಠ ಬೋಧನೆಗಳು ನಮಗೆ ಸದಾ ಮಾರ್ಗದರ್ಶನವನ್ನು ನೀಡುತ್ತಿರುತ್ತದೆ. pic.twitter.com/aelaKgxXZc
— Amit Shah (@AmitShah) May 3, 2022
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತಾ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ.#BasavaJayanti2022 pic.twitter.com/5vccBrfdsF
— Basavaraj S Bommai (@BSBommai) May 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.