ಡೆಹ್ರಾಡೂನ್: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಮವಾರ ಚಾರ್ ಧಾಮ್ ಯಾತ್ರೆಯ ಮಾರ್ಗದಲ್ಲಿ ಭಕ್ತರಿಗೆ ಖಾಸಗಿ ಆರೋಗ್ಯ ಸಂಸ್ಥೆ ಒದಗಿಸುವ ಉಚಿತ ಆರೋಗ್ಯ ಸೇವೆಗಳಿಗೆ ಚಾಲನೆ ನೀಡಿದರು.
ಮೇ 3 ರಂದು ಚಾರ್ ಧಾಮ್ ಯಾತ್ರೆ ಆರಂಭವಾಗಲಿದೆ.
“ಚಾರ್ ಧಾಮ್ ಯಾತ್ರೆಯು ಜನರಿಗೆ ಸುರಕ್ಷಿತ ಮತ್ತು ಆರಾಮದಾಯಕವಾಗಿದೆ ಮತ್ತು ಯಾತ್ರೆಯ ಉದ್ದಕ್ಕೂ ಯಾತ್ರಿಕರು ಆರೋಗ್ಯವಾಗಿರಬೇಕು ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಸಾಮಾಜಿಕ ಸಂಘಟನೆಯ ವೈದ್ಯರು ಮತ್ತು ದಾದಿಯರ ತಂಡಗಳು ಈ ಸಮಯದಲ್ಲಿ ಭಕ್ತರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ” ಎಂದಿದ್ದಾರೆ.
ಚಾರ್ ಧಾಮ್ ಯಾತ್ರೆಗೆ ಉತ್ತರಾಖಂಡ ಸರ್ಕಾರವು ಯಾತ್ರಿಕರ ಸಂಖ್ಯೆಯ ಮೇಲೆ ದೈನಂದಿನ ಮಿತಿಯನ್ನು ನಿಗದಿಪಡಿಸಿದೆ, ಬದರಿನಾಥದಲ್ಲಿ ಪ್ರತಿದಿನ 15,000, ಕೇದಾರನಾಥದಲ್ಲಿ 12,000, ಗಂಗೋತ್ರಿಯಲ್ಲಿ 7,000 ಮತ್ತು ಯಮುನೋತ್ರಿಯಲ್ಲಿ 4,000 ಯಾತ್ರಿಗಳಿಗೆ ಅವಕಾಶ ಕಲ್ಪಿಸಿದೆ.
45 ದಿನಗಳವರೆಗೆ ಯಾತ್ರೆಗೆ ವ್ಯವಸ್ಥೆ ಮಾಡಲಾಗಿದೆ ಮತ್ತು ಯಾತ್ರಿಕರು ಈ ವರ್ಷ ನೆಗೆಟಿವ್ ಪರೀಕ್ಷಾ ವರದಿ ಅಥವಾ ಕೋವಿಡ್-19 ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯುವುದು ಕಡ್ಡಾಯವಲ್ಲ.
Uttarakhand | We're ensuring that Char Dham Yatra will be safe & comfortable for people & that they should remain healthy throughout the yatra. Teams of doctors & nurses from social orgs will be providing health services to devotees during the yatra across the state: CM PS Dhami pic.twitter.com/FZ6h03Z36s
— ANI UP/Uttarakhand (@ANINewsUP) May 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.