ನವದೆಹಲಿ: 2019 ರಿಂದ ಸುಮಾರು 14,000 ಬಾಂಗ್ಲಾದೇಶಿ ಪ್ರಜೆಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ ಮತ್ತು ಭಾರತದೊಳಗೆ ಗಡಿ ಮೂಲಕ ಪ್ರವೇಶಿಸುವುದನ್ನು ತಪ್ಪಿಸಲಾಗಿದೆ ಎಂದುಗಡಿ ಭದ್ರತಾ ಪಡೆ (BSF) ವರದಿ ತಿಳಿಸಿದೆ.
ವರದಿಯ ಪ್ರಕಾರ, 9,233 ಬಾಂಗ್ಲಾದೇಶಿಗಳು ದೇಶದಲ್ಲಿ ಅಕ್ರಮವಾಗಿ ಉಳಿದುಕೊಂಡ ನಂತರ ಹಿಂತಿರುಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
“ಅದೇ ಅವಧಿಯಲ್ಲಿ ಅಂದರೆ 1 ಜನವರಿ 2019 ರಿಂದ 28 ಏಪ್ರಿಲ್ 2022 ರವರೆಗೆ ನೆರೆಯ ದೇಶದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಕನಿಷ್ಠ 4,896 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ” ಎಂದು ಅದು ಹೇಳಿದೆ.
ಕೇವಲ ಮೂರು ವರ್ಷಗಳಲ್ಲಿ 14,361 ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತದಿಂದ ಹೊರ ಕಳುಹಿಸಲಾಗಿದೆ ಎಂದಿದೆ.
ಅತಿ ಹೆಚ್ಚು ಅಕ್ರಮ ವಲಸಿಗರು ಭಾರತವನ್ನು ಪ್ರವೇಶಿಸುವುದು ಅಥವಾ ಹೊರಹೋಗುವುದು ದಕ್ಷಿಣ ಬಂಗಾಳದ ಗಡಿಯಿಂದ ಎಂದು ವರದಿಯು ಹೇಳಿದೆ. ಒಳನುಸುಳುವಿಕೆ ಪ್ರಯತ್ನಗಳ ಸಮಯದಲ್ಲಿ ಅಂತರರಾಷ್ಟ್ರೀಯ ಗಡಿಯಲ್ಲಿ ಒಟ್ಟು 14,361 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಇವರಲ್ಲಿ 11,034 ಬಾಂಗ್ಲಾದೇಶಿ ಪ್ರಜೆಗಳನ್ನು ದಕ್ಷಿಣ ಬಂಗಾಳದ ಗಡಿಯಲ್ಲಿ ಬಂಧಿಸಲಾಗಿದೆ.
ಭಾರತವು ಬಾಂಗ್ಲಾದೇಶದೊಂದಿಗೆ 4,096-ಕಿಮೀ-ಉದ್ದದ ಗಡಿಯನ್ನು ಹಂಚಿಕೊಂಡಿದೆ, ಅದರಲ್ಲಿ ದಕ್ಷಿಣ ಬಂಗಾಳದ ಗಡಿರೇಖೆಯು 913.32 ಕಿಮೀಗಳನ್ನು ಹಂಚಿಕೊಳ್ಳುತ್ತದೆ, ಅದರಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚು ಬೇಲಿಯಿಲ್ಲದ ಅಥವಾ ನದಿ ಪ್ರದೇಶಗಳಾಗಿದೆ. ಕೆಲವು ಸ್ಥಳಗಳಲ್ಲಿ ಹಳ್ಳಿಗಳು ಗಡಿಯಲ್ಲಿವೆ. ಹೀಗಾಗಿ ಒಳನುಸುಳುವಿಕೆಯನ್ನು ಪತ್ತೆ ಹಚ್ಚುವುದು ಭದ್ರತಾ ಪಡೆಗಳಿಗೆ ಕಷ್ಟಕರವಾಗಿದೆ.
“ವಲಸಿಗರು ಭಾರತದಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವೇ ಎಂಬುದನ್ನು ಪರಿಶೀಲಿಸಿದ ನಂತರ ಅವರನ್ನು ಸದ್ಭಾವನಾ ಸೂಚಕವಾಗಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ)ಕ್ಕೆ ಹಸ್ತಾಂತರಿಸಲಾಗುತ್ತದೆ. ಅವರನ್ನು ಜೈಲಿಗೆ ಹಾಕುವ ಉದ್ದೇಶ ಇರುವುದಿಲ್ಲ” ಎಂದಿದೆ.
ಅಕ್ರಮವಾಗಿ ಗಡಿ ದಾಟಿದ ಬಹುತೇಕರು ಜೀವನೋಪಾಯ ಅರಸಿ ಬಂದರು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.