ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ಸಾಂಬಾದಲ್ಲಿರುವ ಪಲ್ಲಿಯ ಕುಗ್ರಾಮವು ಭಾನುವಾರ ದೇಶದ ಮೊದಲ ‘ಕಾರ್ಬನ್ ನ್ಯೂಟ್ರಲ್ ಪಂಚಾಯತ್’ ಆಗಿ ಹೊರಹೊಮ್ಮಿದೆ. ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆ ಸಮಯದಲ್ಲಿ ಸ್ಥಾಪಿಸಲಾದ 500 ಕೆವಿ ಸೌರ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಪಲ್ಲಿಯು ಸ್ವಚ್ಛ ಮತ್ತು ಹಸಿರು ವಿದ್ಯುತ್ ಹೊಂದಿರುವ ಇಡೀ ದೇಶದ ಮೊದಲ ಪಂಚಾಯತ್ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, “ಪಲ್ಲಿಯು ಕಾರ್ಬನ್ ನ್ಯೂಟ್ರಲ್ ಆಗುವ ಮೂಲಕ ದೇಶಕ್ಕೆ ದಾರಿ ತೋರಿಸಿದೆ. ಈ ದೊಡ್ಡ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಅನೇಕ ಅಭಿನಂದನೆಗಳು. ದೆಹಲಿಯಿಂದ ಅಧಿಕೃತ ಕಡತ ತಲುಪಲು ಎರಡು-ಮೂರು ವಾರಗಳನ್ನು ತೆಗೆದುಕೊಳ್ಳುತ್ತಿದ್ದ ಸಮಯವಿತ್ತು. ಇಂದು, ಕೇವಲ ಮೂರು ವಾರಗಳಲ್ಲಿ 500 ಕೆವಿ ಸೌರ ವಿದ್ಯುತ್ ಸ್ಥಾವರವು ಸ್ಥಾಪನೆಯಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ” ಎಂದಿದ್ದಾರೆ.
“ಪಲ್ಲಿಯ ಜನರು ಯೋಜನೆಗೆ ಸಹಾಯ ಮಾಡಿದ್ದಾರೆ. ಅವರು ಯೋಜನೆಯಲ್ಲಿ ತೊಡಗಿದ್ದ ಜನರಿಗೆ ಆಹಾರವನ್ನು ಸಹ ಒದಗಿಸಿದ್ದಾರೆ” ಎಂದಿದ್ದಾರೆ.
ಕೇಂದ್ರ ಸರ್ಕಾರದ ‘ಗ್ರಾಮ ಊರ್ಜ ಸ್ವರಾಜ್’ ಕಾರ್ಯಕ್ರಮದಡಿಯಲ್ಲಿ 6,408 ಚದರ ಮೀಟರ್ನ ಒಟ್ಟು 1,500 ಸೋಲಾರ್ ಪ್ಯಾನೆಲ್ಗಳು ಮಾದರಿ ಪಂಚಾಯಿತಿಯ 340 ಮನೆಗಳಿಗೆ ಶುದ್ಧ ವಿದ್ಯುತ್ ಒದಗಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ಪಾದಿಸಿದ ವಿದ್ಯುತ್ ಅನ್ನು ಸ್ಥಳೀಯ ಪವರ್ ಗ್ರಿಡ್ ಸ್ಟೇಷನ್ ಮೂಲಕ ದಿನಕ್ಕೆ 2,000 ಯೂನಿಟ್ಗಳ ಅಗತ್ಯವಿರುವ ಗ್ರಾಮಕ್ಕೆ ವಿತರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.