ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಕಳೆದ ಏಳು ವರ್ಷಗಳಲ್ಲಿ 45 ಕೋಟಿಗೂ ಹೆಚ್ಚು ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ದೇಶದಾದ್ಯಂತ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು 2014 ರಲ್ಲಿ ಪ್ರಾರಂಭಿಸಲಾಯಿತು. ಜನ್ ಧನ್ ಬಡವರಿಗೆ ತಮ್ಮ ಉಳಿತಾಯವನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರಲು ಒಂದು ಮಾರ್ಗವನ್ನು ಒದಗಿಸಿದೆ. ಈ ಯೋಜನೆಯು ಬ್ಯಾಂಕಿಂಗ್ ವ್ಯವಸ್ಥೆಗೆ ಬಡವರನ್ನು ಕರೆ ತಂದಿದೆ, ಭಾರತದ ಹಣಕಾಸು ವ್ಯಾಪ್ತಿಯನ್ನು ವಿಸ್ತರಿಸಿದೆ ಮತ್ತು ಬಹುತೇಕ ಪ್ರತಿಯೊಬ್ಬ ವಯಸ್ಕರಿಗೆ ಆರ್ಥಿಕ ಸೇರ್ಪಡೆಯನ್ನು ಒದಗಿಸಿದೆ.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಖಾತೆಗಳ ಅಡಿಯಲ್ಲಿ ಒಟ್ಟು ಠೇವಣಿ ಬ್ಯಾಲೆನ್ಸ್ ಏಪ್ರಿಲ್13 ಕ್ಕೆ 1 ಲಕ್ಷದ 68 ಸಾವಿರ ಕೋಟಿ ರೂಪಾಯಿ. ಪ್ರತಿ ಖಾತೆಗೆ ಸರಾಸರಿ ಠೇವಣಿ 3723 ರೂಪಾಯಿಗಳು. ದೇಶದ ಪ್ರಮುಖ ರಾಷ್ಟ್ರೀಯ ಉದ್ದೇಶಗಳಲ್ಲಿ ಒಂದಾಗಿ ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಲು ಸರ್ಕಾರವು ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಜನ-ಕೇಂದ್ರಿತ ಆರ್ಥಿಕ ಉಪಕ್ರಮಗಳಿಗೆ ಅಡಿಪಾಯವಾಗಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಮಹಿಳಾ ಖಾತೆದಾರರ ಖಾತೆಗಳಿಗೆ ಏಪ್ರಿಲ್ 2020 ರಿಂದ ಜೂನ್ 2020 ರವರೆಗೆ ಮೂರು ತಿಂಗಳವರೆಗೆ ತಿಂಗಳಿಗೆ ಐದು ನೂರು ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮಹಿಳಾ ಜನ್ ಧನ್ ಖಾತೆದಾರರ ಖಾತೆಗಳಿಗೆ ಒಟ್ಟು 30 ಸಾವಿರದ 945 ಕೋಟಿ ರೂಪಾಯಿಗಳನ್ನು ಜಮಾ ಮಾಡಲಾಗಿದೆ.
ದೇಶದಲ್ಲಿ ಬ್ಯಾಂಕ್ ಶಾಖೆಗಳು, ಎಟಿಎಂಗಳು, ಬ್ಯಾಂಕ್ ಮಿತ್ರಗಳು ಮತ್ತು ಅಂಚೆ ಕಚೇರಿಗಳಂತಹ ಬ್ಯಾಂಕಿಂಗ್ ಟಚ್ ಪಾಯಿಂಟ್ಗಳನ್ನು ಪತ್ತೆಹಚ್ಚಲು ನಾಗರಿಕ ಕೇಂದ್ರಿತ ವೇದಿಕೆಯನ್ನು ಒದಗಿಸಲು ಮೊಬೈಲ್ ಅಪ್ಲಿಕೇಶನ್, ಜನ್ ಧನ್ ದರ್ಶಕ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಐದು ಕಿಲೋಮೀಟರ್ಗಳ ಒಳಗೆ ಬ್ಯಾಂಕಿಂಗ್ ಟಚ್ ಪಾಯಿಂಟ್ಗಳಿಂದ ಸೇವೆ ಸಲ್ಲಿಸದ ಗ್ರಾಮಗಳನ್ನು ಗುರುತಿಸಲು ಈ ಅಪ್ಲಿಕೇಶನ್ ಅನ್ನು ಸಹ ಬಳಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.