ನವದೆಹಲಿ: ಭಾರತೀಯ ಕೃಷಿ ವಲಯವು ಕ್ರಾಂತಿಕಾರಿ ಮತ್ತು ದಾಖಲೆ ನಿರ್ಮಿಸುವ ಪ್ರದರ್ಶನವನ್ನು ತೋರಿಸುತ್ತಿದೆ.
2021-22ರಲ್ಲಿ 3,160 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯ ನಿರೀಕ್ಷೆ ಇದೆ. ಆದರೆ 2022-23ಕ್ಕೆ ಕೃಷಿ ಕುರಿತ ರಾಷ್ಟ್ರೀಯ ಸಮ್ಮೇಳನವು ಒಟ್ಟು ಆಹಾರ ಧಾನ್ಯ ಉತ್ಪಾದನೆಯ ರಾಷ್ಟ್ರೀಯ ಗುರಿಯನ್ನು 3,280 ಲಕ್ಷ ಟನ್ಗಳಿಗೆ ನಿಗದಿಪಡಿಸಿದೆ.
ಅಂತರ ಬೆಳೆ ಮತ್ತು ಬೆಳೆ ವೈವಿಧ್ಯೀಕರಣದ ಮೂಲಕ ಕೃಷಿ ಪ್ರದೇಶವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಉತ್ತರ ಭಾರತದಲ್ಲಿ ಕೋವಿಡ್ ಮತ್ತು ರೈತರ ಆಂದೋಲನದಿಂದಾಗಿ ಅನೇಕ ಸವಾಲುಗಳು ಎದುರಾದರೂ ಒಂದು ವರ್ಷದಲ್ಲಿ ಕೃಷಿ ವಲಯದಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಾಗಿದೆ ಎಂಬುದು ಮಹತ್ವದ ಸಂಗತಿ.
ಕಡಿಮೆ ಇಳುವರಿ ನೀಡುವ ಪ್ರದೇಶಗಳಲ್ಲಿ ಸೂಕ್ತವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತಹ ಕ್ರಮಗಳ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಕಡೆಗೆ ಕೇಂದ್ರೀಕೃತ ವಿಧಾನ ಅನುಸರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
3,280 ಲಕ್ಷ ಟನ್ಗಳ ಗುರಿಯು 2021-22ರ ಅಂದಾಜು 316 ಮಿಲಿಯನ್ ಟನ್ಗಳ ಉತ್ಪಾದನೆಗಿಂತ 3.7% ಹೆಚ್ಚಾಗಿದೆ, ಇದು ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಮತ್ತಷ್ಟು ಬೆಳವಣಿಗೆಯ ಭರವಸೆಯನ್ನು ಹೆಚ್ಚಿಸಿದೆ.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಸಗೊಬ್ಬರಗಳ ಕೊರತೆಯ ಸಾಧ್ಯತೆಯ ಬಗ್ಗೆ ವರದಿಗಳಿದ್ದರೂ, ರಸಗೊಬ್ಬರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರವು ಭರವಸೆ ನೀಡಿದೆ.
ರೈತರ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಕೀಟನಾಶಕಗಳು ಮತ್ತು ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.