ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಿಜೆಪಿ ಪಕ್ಷದ 42 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
“ಈ ವರ್ಷದ ಸಂಸ್ಥಾಪನಾ ದಿನವು ಮೂರು ಕಾರಣಗಳಿಂದ ಬಹಳ ಮಹತ್ವದ್ದಾಗಿದೆ. ಮೊದಲನೆಯದಾಗಿ, ನಾವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದೇವೆ. ಇದು ಸ್ಫೂರ್ತಿಯ ಪ್ರಮುಖ ಸಂದರ್ಭವಾಗಿದೆ. ಎರಡನೆಯದು, ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿ. ಭಾರತಕ್ಕೆ ನಿರಂತರವಾಗಿ ಹೊಸ ಅವಕಾಶಗಳು ಬರುತ್ತಿವೆ. ಮೂರನೆಯದಾಗಿ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಇತ್ತೀಚೆಗೆ ನಾಲ್ಕು ರಾಜ್ಯಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಮೂರು ದಶಕಗಳ ನಂತರ ಒಂದು ಪಕ್ಷವು ರಾಜ್ಯಸಭೆಯಲ್ಲಿ 100 ಸದಸ್ಯರ ಗಡಿಯನ್ನು ಮುಟ್ಟಿದೆ” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
“ಯಾವುದೇ ಪಕ್ಷದ ಸರಕಾರ ಬಂದರೂ ದೇಶಕ್ಕಾಗಿ ಏನನ್ನೂ ಮಾಡುವುದಿಲ್ಲ ಎಂದು ಜನರು ಒಪ್ಪಿಕೊಂಡ ಕಾಲವೊಂದಿತ್ತು. ಜನರಲ್ಲಿ ಹತಾಶೆ ಇತ್ತು. ಇಂದು ದೇಶದ ಪ್ರತಿಯೊಬ್ಬ ಪ್ರಜೆ ಕೂಡ ರಾಷ್ಟ್ರವು ಬದಲಾಗುತ್ತಿದೆ ಮತ್ತು ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಯಾವುದೇ ಭಯ ಅಥವಾ ಒತ್ತಡವಿಲ್ಲದೆ ತನ್ನ ಹಿತಾಸಕ್ತಿಗಳಿಗಾಗಿ ದೃಢವಾಗಿ ನಿಂತಿರುವ ಭಾರತವು ಇಂದು ಪ್ರಪಂಚದ ಮುಂದೆ ಇದೆ. ಇಡೀ ಪ್ರಪಂಚವು ಎರಡು ಬಣಗಳಾಗಿ ವಿಭಜನೆಯಾಗಿದೆ, ಭಾರತವನ್ನು ಮಾನವೀಯತೆಯ ಬಗ್ಗೆ ದೃಢವಾಗಿ ಮಾತನಾಡುವ ರಾಷ್ಟ್ರವಾಗಿ ನೋಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
A special occasion for us BJP Karyakartas. Addressing on the Party's #SthapnaDiwas. https://t.co/KCUiiBDLcw
— Narendra Modi (@narendramodi) April 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.