ಕಠ್ಮಂಡು: ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಮತ್ತೆ ಘೋಷಿಸುವ ಬೇಡಿಕೆಯನ್ನು ನೇಪಾಳ ಸರ್ಕಾರದ ಹಿರಿಯ ಸಚಿವ ಪ್ರೇಮ್ ಅಲೆ ಇತ್ತೀಚೆಗೆ ಬೆಂಬಲಿಸಿದ್ದಾರೆ.
“ಬಹುಪಾಲು ಜನರು ಇದರ ಪರವಾಗಿ ಇದ್ದರೆ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಘೋಷಣೆ ಮಾಡಬಹುದು” ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರೇಮ್ ಅಲೆ ಅವರು ಕಠ್ಮಂಡುವಿನಲ್ಲಿ ವಿಶ್ವ ಹಿಂದೂ ಫೆಡರೇಶನ್ನ ಎರಡು ದಿನಗಳ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಾ, “ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬೇಡಿಕೆಯನ್ನು ಪರಿಗಣಿಸಬಹುದು. ಬೇಡಿಕೆಯ ಈಡೇರಿಕೆಯಲ್ಲಿ ರಚನಾತ್ಮಕ ಪಾತ್ರವನ್ನು ನಿರ್ವಹಿಸುತ್ತೇನೆ” ಎಂದಿದ್ದಾರೆ.
‘ನಮ್ಮ ಸಂವಿಧಾನವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ ಆದರೆ ಬಹುಪಾಲು ಜನಸಂಖ್ಯೆ ಹಿಂದೂ ರಾಷ್ಟ್ರದ ಪರವಾಗಿದ್ದರೆ, ನೇಪಾಳವನ್ನು ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಹಿಂದೂ ರಾಷ್ಟ್ರ ಎಂದು ಏಕೆ ಘೋಷಿಸಲಿಲ್ಲ?’ ಎಂದು ಸಚಿವ ಪ್ರೇಮ್ ಅಲೆ ಪ್ರಶ್ನಿಸಿದ್ದಾರೆ.
2006 ರ ಸಾಮೂಹಿಕ ಚಳುವಳಿಯ ನಂತರ ರಾಜಪ್ರಭುತ್ವವನ್ನು ರದ್ದುಗೊಂಡು ನೇಪಾಳವನ್ನು 2008 ರಲ್ಲಿ ಜಾತ್ಯತೀತ ರಾಷ್ಟ್ರವೆಂದು ಘೋಷಿಸಲಾಯಿತು. ನೇಪಾಳವು ಬಹುಪಾಲು ಹಿಂದೂ ಜನಸಂಖ್ಯೆಯನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಫೆಡರೇಶನ್ ಇಂಟರ್ನ್ಯಾಶನಲ್ನ ಅಧ್ಯಕ್ಷ ಅಜಯ್ ಸಿಂಗ್, ನೇಪಾಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಜನಸಂಖ್ಯೆ ವಾಸಿಸುತ್ತಿರುವ ಕಾರಣ ಅದನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.