ನವದೆಹಲಿ: ಇಂದು ಜೈಪುರದಲ್ಲಿ ಒಟ್ಟು 23 ಭಾರತೀಯ ಸೇನಾ ಅಧಿಕಾರಿಗಳು ಮತ್ತು ಇತರ ಶ್ರೇಣಿಯ ಸಿಬ್ಬಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವೆಗಳನ್ನು ನೀಡಿ ಗೌರವಿಸಲಾಯಿತು.
ಸೌತ್ ವೆಸ್ಟರ್ನ್ ಕಮಾಂಡ್ ಇನ್ವೆಸ್ಟಿಚರ್ ಸಮಾರಂಭವನ್ನು ಜೈಪುರ ಮಿಲಿಟರಿ ಸ್ಟೇಶನ್ನ 61 ಕ್ಯಾವಲ್ರಿ ಪೋಲೋ ಮೈದಾನದಲ್ಲಿ ನಡೆಸಲಾಯಿತು.
ಒಟ್ಟು 14 ಸೇನಾ ಪದಕಗಳು (ಶೌರ್ಯ), ಒಂದು ಯುದ್ಧ ಸೇವಾ ಪದಕ, ನಾಲ್ಕು ಸೇನಾ ಪದಕ (ವಿಶಿಷ್ಟ) ಮತ್ತು ಐದು ವಿಶಿಷ್ಟ ಸೇವಾ ಪದಕಗಳನ್ನು ಸೌತ್ ವೆಸ್ಟರ್ನ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಎಎಸ್ ಭಿಂದರ್ ಅವರು ಪ್ರದಾನಿಸಿದರು.
ವೈಯಕ್ತಿಕ ಶೌರ್ಯ ಮತ್ತು ಕರ್ತವ್ಯಕ್ಕೆ ಅಸಾಧಾರಣ ಸಮರ್ಪಣೆಯ ಕಾರ್ಯಗಳಿಂದ ತಮ್ಮನ್ನು ತಾವು ಗುರುತಿಸಿಕೊಂಡಿರುವ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ನೀಡಲು ವರ್ಷಕ್ಕೊಮ್ಮೆ ೀ ಸಮಾರಂಭವನ್ನು ನಡೆಸಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರಲ್ಲಿ 15 ಅಧಿಕಾರಿಗಳು, ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು ಇತರ ಶ್ರೇಣಿಯ ಆರು ಸಿಬ್ಬಂದಿ ಸೇರಿದ್ದಾರೆ.
ಎರಡು ಶೌರ್ಯ ಪ್ರಶಸ್ತಿಗಳನ್ನು ನೈಬ್ ಸುಬೇದಾರ್ ಮಂದೀಪ್ ಸಿಂಗ್ ಮತ್ತು ನಾಯಬ್ ಸುಬೇದಾರ್ ಸತ್ನಾಮ್ ಸಿಂಗ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಅವರ ಪತ್ನಿಯರು ಪ್ರಶಸ್ತಿ ಸ್ವೀಕರಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.