ಬೆಂಗಳೂರು: ಉಡುಪಿ ಸರ್ಕಾರಿ ಶಾಲೆಯ ಹಳೆ ವಿದ್ಯಾರ್ಥಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ ಅನ್ನು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಿದ್ದಾರೆ. ಪ್ರಶಾಂತ್ ಆಚಾರ್ ಎಂಬ ಹಳೆ ವಿದ್ಯಾರ್ಥಿ ಯ ಯೋಜನೆಯಂತೆ ಈ ಸ್ಮಾರ್ಟ್ ಕ್ಲಾಸ್ ರೂಪುಗೊಂಡಿದೆ. ತರಗತಿಗಳು ಕೊರತೆ ಅನುಭವಿಸುತ್ತಿದ್ದ ಶಾಲೆಗೆ ಇದರಿಂದ ಸಾಕಷ್ಟು ಪ್ರಯೋಜನವಾಗಿದೆ.
2020 ರಲ್ಲಿ ಆಚಾರ್ ಅವರು ಕೆಎಸ್ಆರ್ಟಿಸಿ ಬಸ್ನ ಮಿನಿಯೇಚರ್ ಮಾಡೆಲ್ ತಯಾರಿಸಿದರು ಮತ್ತು ಅದನ್ನು ಅಧಿಕಾರಿಗಳಿಗೆ ತೋರಿಸಿದರು. ನಂತರ ತರಗತಿಗಳ ಕೊರತೆ ಅನುಭವಿಸುತ್ತಿದ್ದ 85 ವಿದ್ಯಾರ್ಥಿಗಳ ಶಾಲೆಗೆ ಕೆಎಸ್ಆರ್ಟಿಸಿ ಬಸ್ ನೀಡುವಂತೆ ಬೇಡಿಕೆ ಇಟ್ಟರು. ಇವರ ಮಿನಿಯೇಚರ್ ಬಸ್ನಿಂದ ಪ್ರೇರಿತರಾದ ಅಧಿಕಾರಿಗಳು ಅವರಿಗೆ 9 ಲಕ್ಷ ಕಿಮೀ ಓಡಿದ್ದ ಹಳೆ ಬಸ್ ಅನ್ನು ಉಚಿತವಾಗಿ ನೀಡಿದರು.
ಈ ಬಸ್ ಅನ್ನು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಲಾಯಿತು. ಇದಕ್ಕಾಗಿ ಅನೇಕ ಪೋಷಕರು ಮತ್ತು ಗ್ರಾಮಸ್ಥರು ಕೊಡುಗೆ ನೀಡಿದ್ದಾರೆ. ಬಸ್ಗೆ ಪೇಯಿಂಟ್ ಮಾಡಿ ಆರ್ಟ್ ವರ್ಕ್ ಮಾಡಲಾಗಿದೆ. ಈ ಮೂಲಕ ಮಕ್ಕಳಿಗೆ ಆಕರ್ಷಕಗೊಳಿಸಲಾಗಿದೆ. ಮಕ್ಕಳಿಗಾಗಿ ಅದರಲ್ಲಿ ಸಣ್ಣ ಟೇಬಲ್ ಮತ್ತು ಚೇರ್ ಕೂಡ ಇದೆ. ಮಾರ್ಚ್ 12 ರಂದು ಈ ಬಸ್ನ ಉದ್ಘಾಟನೆ ಕೂಡ ನೆರವೇರಲಿದೆ.
“ಬಸ್ ಮೂಡಿ ಬಂದ ರೀತಿ ನಿಜಕ್ಕೂ ಸಂತೋಷ ತಂದಿದೆ. ಇದರಿಂದ ಶಾಲೆಯಲ್ಲಿ ಕಲಿಯುವ ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ” ಎಂದು ಆಚಾರ್ ಹೇಳಿದ್ದಾರೆ.
Classroom on Wheels is a great grassroot level initiative to help fill the education gap caused by school drop outs during the coronavirus pandemic.@SchoolonWheels @KSRTC_Journeys @BBMPCOMM @BCNagesh_bjp @dpradhanbjp @RaghupathiBhat @ShobhaBJP https://t.co/nkfbE6ZtSj
— Visit Udupi (@VisitUdupi) March 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.