ನವದೆಹಲಿ: ರೈಲುಗಳ ರಿಸರ್ವೇಶನ್ (ಕಾಯ್ದಿರಿಸಿದ) ಟಿಕೆಟ್ಗಳಿಗೆ ಪ್ರಯಾಣಿಕರು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ರೈಲ್ವೆ ಇಲಾಖೆ 4 ಮಹಾನಗರಗಳಲ್ಲಿ ಕಾಗದರಹಿತ ಸೀಸನ್ ಟಿಕೆಟ್ ಮತ್ತು ಪ್ಲಾಟ್ಫಾರಂ ಟಿಕೆಟ್ ಪಡೆಯಲು ಹೊಸ ಆಪ್ ಒಂದನ್ನು ಪರಿಚಯಿಸಿದೆ.
ದೆಹಲಿ, ಮುಂಬಯಿ, ಕೋಲ್ಕತಾ ಮತ್ತು ಚೆನ್ನೈಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈಗಾಗಲೇ ಕಾಗದರಹಿತ ರೈಲ್ವೆ ಟಿಕೆಟ್ ವ್ಯವಸ್ಥೆಯನ್ನು ದಕ್ಷಿಣ ರೈಲ್ವೆಯ ಚೆನ್ನೈ- ಎಗ್ಮೋರ್, ತುಂಬರಂ ಉಪನಗರಗಳಲ್ಲಿ ಎಪ್ರಿಲ್ನಲ್ಲಿ ಹಾಗೂ ಪಶ್ಚಿಮ ರೈಲ್ವೆಯ ಚರ್ಚ್ ಗೇಟ್- ದಹನು ಉಪನಗರ ವಲಯಗಳಲ್ಲಿ ಜುಲೈನಲ್ಲಿ ಜಾರಿಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.